Advertisement

ಝಾರ್ಖಂಡ್‌: ಅಲ್‌ಕಾಯಿದಾ ಉಗ್ರ ಕಲೀಮುದ್ದೀನ್‌ ಬಂಧನ

09:07 AM Sep 24, 2019 | Team Udayavani |

ರಾಂಚಿ: ಅಲ್‌ಕಾಯಿದಾದ ಮೋಸ್ಟ್ ವಾಂಟೆಡ್‌ ಭಯೋತ್ಪಾದಕ ಮೊಹಮ್ಮದ್‌ ಕಲೀಮುದ್ದೀನ್‌ ಮುಜಾಹಿರಿಯನ್ನು ದಿಲ್ಲಿ ಜಾರ್ಖಂಡ್‌ ಪೊಲೀಸ್‌ನ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್‌) ಇಲ್ಲಿನ ತತಾನಗರ್‌ ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದೆ. ಭಾರತದಲ್ಲಿ ಯುವಕರನ್ನು ಜಿಹಾದ್‌ ನಡೆಸುವಂತೆ ಪ್ರೇರೇಪಿಸುವ ಮತ್ತು ಅದಕ್ಕಾಗಿ ಅವರನ್ನು ತಯಾರು ಮಾಡುವ ಕೆಲಸವನ್ನು ಈತ ಮಾಡುತ್ತಿದ್ದ.

Advertisement

ಅಲ್ಲದೆ ಹೊಸದಾಗಿ ಯುವಕರನ್ನು ನೇಮಕ ಮಾಡಿ, ಬಳಿಕ ಅವರನ್ನು ಪಾಕಿಸ್ಥಾನಕ್ಕೆ ತರಬೇತಿಗಾಗಿ ಕಳುಹಿಸುತ್ತಿದ್ದ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಂ.ಎಲ್‌.ಮೀನಾ ತಿಳಿಸಿದ್ದಾರೆ. ಜೆಮ್ಶೆಡ್‌ಪುರದ ನಿವಾಸಿಯಾದ ಕಲೀಮುದ್ದೀನ್‌ ಕಳೆದ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಉಗ್ರ ನೇಮಕಕ್ಕಾಗಿ ಇವನು ಗುಜರಾತ್‌, ಉತ್ತರಪ್ರದೇಶ, ಪಶ್ಚಿಮ ಬಂಗಾಲ ಮತ್ತಿತರ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲದೆ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ ಮತ್ತು ಇತರೆ ದೇಶಗಳಿಗೂ ಈತ ಹೋಗಿ ಬಂದಿದ್ದಾನೆ ಎಂದು ಎಟಿಎಸ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next