Advertisement
ಆರೋಪಿ ಆನಂದ್ 2012 ಎ. 27-28ರ ನಡುವೆ ಮನೆಯ ಬೀಗವನ್ನು ಮುರಿದು 90 ಸಾವಿರ ಮೌಲ್ಯದ ಚಿನ್ನಾಭರಣ, ಜಾಗದ ದಾಖಲಾತಿ ಕಳವು ಮಾಡಿದ್ದು, ರತ್ನಾ ಈ ಕೃತ್ಯಕ್ಕೆ ಸಹಕಾರ ನೀಡಿದ್ದರು ಎಂದು ಕಾರ್ಕಳ ನಗರ ಠಾಣೆ ಪೊಲೀಸ್ ಉಪ ನಿರೀಕ್ಷಕರು ಕೋರ್ಟ್ಗೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಅವರು ಆರೋಪಿತರ ವಿರುದ್ಧ ಪ್ರಕರಣ ಸಾಬೀತು ಆಗಿದೆ ಎಂದು ಅಭಿಪ್ರಾಯಪಟ್ಟು, ಆರೋಪಿ ಆನಂದ್ಗೆ 3 ವರ್ಷ 6 ತಿಂಗಳ ಜೈಲು ಶಿಕ್ಷೆ, 2 ಸಾವಿರ ರೂ. ದಂಡ, ರತ್ನಾಳಿಗೆ 6 ತಿಂಗಳು ಜೈಲು, 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
Advertisement
ಚಿನ್ನಾಭರಣ ಕಳವು: ಆರೋಪಿಗಳಿಗೆ ಶಿಕ್ಷೆ
12:17 AM Jul 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.