Advertisement

Jewelery theft: ಮನೆಗೆ ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ

07:28 PM May 23, 2024 | Team Udayavani |

ಪುತ್ತೂರು: ಪಡೀಲು ವಿಜಯನಗರ ಬಡಾವಣೆಯ ಮನೆಯೊಂದಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೇ 23ರಂದು ಬೆಳಕಿಗೆ ಬಂದಿದೆ.

Advertisement

ಪುತ್ತೂರಿನಲ್ಲಿ ಸುದಾನ ಸಂಗೀತ ಕಲಾ ಶಾಲೆ ನಿರ್ದೇಶಕ ವಿದ್ವಾನ್‌ ಕಾಂಚನ ಈಶ್ವರ ಭಟ್‌ ಅವರ ಮನೆಯಲ್ಲಿ ಕಳವು ನಡೆದಿದೆ. ಘಟನೆ ನಡೆದ ದಿನ ಈಶ್ವರ ಭಟ್‌ ಅವರು ಸಂಗೀತ ಕಾರ್ಯಕ್ರಮಕ್ಕೆಂದು ಮೈಸೂರಿಗೆ ಹೋಗಿದ್ದು, ಅವರ ಪುತ್ರ ಬೆಂಗಳೂರಿಗೆ ಹೋಗಿದ್ದರು. ಮೇ 23ರಂದು  ಈಶ್ವರ ಭಟ್‌ ಮನೆಗೆ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಮನೆ ಪರಿಸರವನ್ನು ಅರಿತವರೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮನೆಯ ಎದುರಿನ ಬಾಗಿಲ ಬೀಗ ಮುರಿದು ಬಿದ್ದಿದ್ದು, ಮನೆಯೊಳಗೆ ಸೆಲ್ಪ್ನಲ್ಲಿ ಇರಿಸಿದ್ದ 10 ಪವನ್‌ ಚಿನ್ನಾಭರಣ ಕಳವಾಗಿದೆ.  ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸತೀಶ್‌, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next