Advertisement

ಕೊಲ್ಲೂರಿನಲ್ಲಿ ಚಿನ್ನಾಭರಣ ಕಳವು; ಆರೋಪಿ ಶಿವಮೊಗ್ಗದಲ್ಲಿ ಬಂಧನ

04:35 PM Jul 03, 2023 | Team Udayavani |

ಕೊಲ್ಲೂರು : ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಕಾಸರಗೋಡು ಮೂಲದ ಮಹಿಳೆಯ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಜುಲೈ 02 ರಂದು ಬಂಧಿಸಲಾಗಿದೆ.

Advertisement

ಬಂಧಿತ ಆರೋಪಿ ತೀರ್ಥಹಳ್ಳಿಯ ಕಂಧಕ ಗ್ರಾಮದ ಬಿ.ಜೆ.ಗಿರೀಶ್(34) ಎಂಬಾತನಾಗಿದ್ದಾನೆ. ಜೂನ್ 04 ರಂದು ಕಳವು ಪ್ರಕರಣ ನಡೆದಿತ್ತು. ಬಂಧಿತನ ಬಳಿಯಿಂದ 4,75,000 ರೂ. ಮೌಲ್ಯದ 108 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಯ ಉಪ ಅಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿಎಸೈ ಗಳಾದ ಜಯಶ್ರೀ ಹುನ್ನೂರು, ಸುಧಾರಾಣಿ ಟಿ., ಕೊಲ್ಲೂರು ಠಾಣಾ ಸಿಬಂದಿಗಳಾದ ನಾಗೇಂದ್ರ ಹೆಚ್.ಸಿ. ಮತ್ತು ಸಂದೀಪ ಕುರಣಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next