Advertisement

ಬಸ್‌ ಬಂದ್ರೂ ಜನ ಬರಲಿಲ್ಲ

12:00 PM May 22, 2020 | Naveen |

ಜೇವರ್ಗಿ: ಲಾಕ್‌ಡೌನ್‌ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದ ಸಾರಿಗೆ ಸಂಸ್ಥೆಯ 5 ಬಸ್‌ಗಳ ಸಂಚಾರ ಆರಂಭವಾಗಿದೆ. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದು, ಸಾರಿಗೆ ಬಸ್‌ಗಳು ಕೆಲ ಭಾಗಗಳಲ್ಲಿ ಖಾಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಗುರುವಾರ ಜೇವರ್ಗಿ ಬಸ್‌ ಘಟಕದಿಂದ ಬೆಂಗಳೂರಿಗೆ ಒಂದು ಬಸ್‌ ಹಾಗೂ ಕಲಬುರಗಿಗೆ 4 ಬಸ್‌ ಗಳ ಓಡಾಟ ಆರಂಭಿಸಲಾಗಿದೆ. ಬೆಂಗಳೂರಿಗೆ ತೆರಳಿದ ಬಸ್‌ನಲ್ಲಿ 28 ಜನ ಪ್ರಯಾಣಿಕರು ಪ್ರಯಾಣ ಬೆಳೆಸಿದರು. ಪ್ರಯಾಣಕ್ಕೂ ಮುನ್ನ ವಿಳಾಸ ನಮೂದಿಸಿಕೊಂಡು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಸಿಂಪರಣೆ, ಥರ್ಮಲ್‌ ಸ್ಕ್ರಿನಿಂಗ್‌ ತಪಾಸಣೆ ನಡೆಸಲಾಯಿತು.

ಬೆಳಿಗ್ಗೆಯಿಂದ ಸಂಜೆವರೆಗೂ ಬಸ್‌ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಸಾರಿಗೆ ಸಂಸ್ಥೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹೊರತುಪಡಿಸಿ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಕಂಡುಬರಲಿಲ್ಲ. ಬಸ್‌ ಸಂಚಾರ ಪ್ರಾರಂಭವಾಗಿದ್ದರೂ ಸಂಚಾರಕ್ಕೆ ಪ್ರಯಾಣಿಕರೇ ಬರುತ್ತಿಲ್ಲ. ಕೆಲ ಪ್ರಯಾಣಿಕರು ನೂರೆಂಟು ಪ್ರಶ್ನೆಗಳನ್ನು ಕೇಳಿ ವಾಪಸ್‌ ಹೋಗುತ್ತಿದ್ದಾರೆ. ಮರಳಿ ಬರುವುದಕ್ಕೆ ಬಸ್‌ ಇದೆಯಾ?ಎಷ್ಟೊತ್ತಿಗೆ ಬರುತ್ತದೆ? ಇತ್ಯಾದಿ ಮಾಹಿತಿ ಕೇಳಿ ವಾಪಸ್ಸಾಗುತ್ತಿದ್ದಾರೆ. ಅದರಲ್ಲೂ ಕಲಬುರಗಿ ನಗರದಲ್ಲಿ ಸಾಕಷ್ಟು ಕೋವಿಡ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜೇವರ್ಗಿಯಿಂದ ಪ್ರಯಾಣಿಸಲು ಜನ ಹೆದರುತ್ತಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next