Advertisement

ಜಾಲಹಳ್ಳಿ :BMTC ಬಸ್‌ಗೆ ಸೈಕಲ್‌ ಸವಾರ ಬಲಿ,ಉದ್ರಿಕ್ತ ವಾತಾವರಣ 

10:57 AM May 10, 2017 | Team Udayavani |

ಬೆಂಗಳೂರು : ಜಾಲಹಳ್ಳಿಯ ಎನ್‌ಡಿಡಿಎಫ್ ರಸ್ತೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್‌ ಹರಿದು ಸೈಕಲ್‌ ಸವಾರನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. 

Advertisement

ಸ್ಟಿಯರಿಂಗ್‌ ಸಿಸ್ಟಂನಲ್ಲಿ ಉದ್ಯೋಗಿಯಾಗಿದ್ದ ರವಿ ಎನ್ನುವ ಯುವಕ ಮೃತ ದುರ್‌ದೈವಿ ಎಂದು ತಿಳಿದು ಬಂದಿದೆ.

ಅಪಘಾತ ನಡೆದ ತಕ್ಷಣ ಬಸ್‌ ಚಾಲಕ ಬಸ್ಸನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳದಲ್ಲಿ ಉದ್ರಿಕ್ತ ವಾತಾವರಣ 

ಅಪಘಾತದ ಬಳಿಕ ರವಿ ಶವವನ್ನು ಸ್ಥಳದಲ್ಲೇ ಇಟ್ಟು ಪ್ರತಿಭಟನೆ ನಡೆಸಲಾಯಿತು.ಸಂಬಂಧಿಕರು, ಸ್ನೇಹಿತರು ಮತ್ತು ಸ್ಟಿಯರಿಂಗ್‌ ಸಿಸ್ಟಂ ಉದ್ಯೋಗಿಗಳು ಪ್ರತಿಭಟನೆ ನಡೆಸಿ ಬಿಎಂಟಿಸಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next