Advertisement

CM ನಿತೀಶ್‌ಗೆ ಇರಿಸುಮುರಿಸು ಆಗಬಾರದೆಂದು ರಾಜೀನಾಮೆ: ಜೆಡಿಯು ವಕ್ತಾರ ಆಲೋಕ್‌

09:42 AM Jun 18, 2019 | Sathish malya |

ಪಟ್ನಾ : ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಗೆ ತನ್ನಿಂದ ಇರಿಸುಮುರಿಸು ಆಗಬಾರದೆಂಬ ಕಾರಣಕ್ಕೆ ತಾನು ಪಕ್ಷದ ವಕ್ತಾರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉರಿ ನಾಲಗೆಯ ಜೆಡಿಯು ನಾಯಕ ಅಜಯ್‌ ಆಲೋಕ್‌ ಹೇಳಿದ್ದಾರೆ.

Advertisement

ಆಲೋಕ್‌ ಅವರು ನಿತೀಶ್‌ ಕುಮಾರ್‌ ಗೆ ತನ್ನಿಂದ ಯಾವಾಗ ಮತ್ತು ಹೇಗೆ ಮುಜುಗರ ಉಂಟಾಗಿದೆ ಎಂಬುದನ್ನು ವಿವರಿಸಿಲ್ಲ.

ಆದರೆ ವದಂತಿಗಳ ಪ್ರಕಾರ ಆಲೋಕ್‌ ಅವರು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಕಾರವನ್ನು ಹಾಗೂ ಅಲ್ಲಿನ ಕಾನೂನು ಬಾಹಿರ ಒಳ ವಲಸೆ ಸಮಸ್ಯೆಯನ್ನು ಕಟುವಾಗಿ ಟೀಕಿಸಿರುವುದು ನಿತೀಶ್‌ ಕುಮಾರ್‌ ಗೆ ಕಿರಿಕಿರಿ, ಅಸಮಾಧಾನ ಉಂಟು ಮಾಡಿದೆ ಎನ್ನಲಾಗಿದೆ.

ಅಜಯ್‌ ಆಲೋಕ್‌ ಅವರು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ವಶಿಷ್ಠ ನಾರಾಯಣ ಸಿಂಗ್‌ ಅವರಿಗೆ ಬರೆದಿರುವ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್‌ ನಲ್ಲಿ ಶೇರ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next