Advertisement

ಸಾಮಾನ್ಯ ರೈತನಾಗಿ ಸ್ಪರ್ಧಿಸಿದ್ದೇನೆ: ಶ್ರೀನಾಥ್‌

03:45 PM Apr 30, 2023 | Team Udayavani |

ಕೋಲಾರ: ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರು ಮಾಜಿ ಸಚಿವರು, ಮತ್ತೂಬ್ಬರು ಮಾಜಿ ಶಾಸಕ ಈಗಾಗಲೇ ಅಧಿಕಾರವನ್ನು ಅನುಭವಿಸಿದ್ದಾರೆ. ಇವರ ನಡುವೆ ಸಾಮಾನ್ಯ ರೈತನ ಮಗನಾಗಿ ನಿಮ್ಮ ಮುಂದೆ ಬಂದಿದ್ದೇನೆ. ಕ್ಷೇತ್ರದ ಮತದಾ ರರು ನನಗೆ ಈ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿದರೆ ರೈತರು ಗೆದ್ದಂತೆ ಎಂದು ಜೆಡಿಎಸ್‌ ಪಕ್ಷದ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌ ಹೇಳಿದರು.

Advertisement

ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಮಜರಾ ಹನುಮಂತನಗರ ಗೇಟ್‌ ನಲ್ಲಿ ಜೆಡಿಎಸ್‌ ಪಕ್ಷದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿ, ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದ ಹೊರಗಡೆಯಿಂದ ಬಂದಿರುವವರು. ಆದರೆ, ನಾನು ಸ್ಥಳೀಯ ನಾಗಿದ್ದು ದಿನನಿತ್ಯ ನಿಮ್ಮ ಕಷ್ಟಗಳಿಗೆ ಸದಾ ಕಾಲ ಸಿಗುತ್ತೇನೆ. ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.

ಜೆಡಿಎಸ್‌ಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ: ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಜಾತಿ-ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಮುಖ್ಯವಲ್ಲ, ಅಧಿಕಾರ ಅಷ್ಟೇ ಮುಖ್ಯವಾಗಿದೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಟಾರ್‌ ನಟರು ಬರಬಹುದು. ಆದರೆ, ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಮಾಜಿ ಪ್ರಧಾನಿ ಮಂತ್ರಿ ಎಚ್‌. ಡಿ.ದೇವೇಗೌಡರು, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಿಎಂ ಇಬ್ರಾಹಿಂ ಮತ್ತು ಜೆಡಿಎಸ್‌ ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಸ್ಟಾರ್‌ ಪ್ರಚಾರಕರು ಎಂದರು.

ಕುಮಾರಸ್ವಾಮಿ ಕೈ ಬಲಪಡಿಸಿ: ಕೋಲಾರ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್‌ ಪರವಾದ ಅಲೆಯಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಸೋಲಿಸುವ ಮೂಲಕ ಕ್ಷೇತ್ರದ ಜನತೆ ಪ್ರಾದೇಶಿಕ ಪಕ್ಷಕ್ಕೆ ಬೆಂಬಲಿಸಿ, ಪಂಚರತ್ನ ಯೋಜನೆಗಳಾದ ಉಚಿತ ಆರೋಗ್ಯ, ಉಚಿತ ಶಿಕ್ಷಣ, ಯುವಕರಿಗೆ ಉದ್ಯೋಗ, ಮಹಿಳಾ ಸಬಲೀಕರಣ, ಕೃಷಿಗೆ ಉತ್ತೇಜನ ನೀಡುವ ಅಂಶಗಳು ಈ ಪಂಚರತ್ನ ಯೋಜನೆಯಲ್ಲಿದೆ. ಪಂಚರತ್ನ ಯೋಜನೆ ಜಾರಿ ಯಾಗಬೇಕಾದರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮರಸ್ವಾಮಿ ಅವರ ಕೈ ಬಲಪಡಿಸಬೇಕು. ನಿಮ್ಮ ಮನೆ ಮಗ ಸಿಎಂಆರ್‌ ಶ್ರೀನಾಥ್‌ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮತ ಖರೀದಿಗೆ ಬಂದವರಿಗೆ ತಕ್ಕ ಪಾಠ ಕಲಿಸಿ: ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ವಕ್ಕಲೇರಿ ರಾಮು ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಹಣ ಕೊಟ್ಟ ಮತ ಖರೀದಿಸಲು ಬಂದಿದ್ದಾರೆ. ಸ್ವಾಭಿಮಾನದಿಂದ ಅಂತಹ ವ್ಯಕ್ತಿಗ ಳಿಗೆ ಬುದ್ಧಿ ಕಲಿಸಬೇಕಾಗಿದೆ. ಕೋಲಾರ ಸಮಗ್ರ ಅಭಿವೃದ್ಧಿ ಸ್ವಾಭಿಮಾನ ಕೋಲಾರ ನಿರ್ಮಾಣದ ಕನಸು ಕಂಡಿರುವ ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು.

Advertisement

ಮಾಜಿ ತಾಪಂ ಸದಸ್ಯ ಪಾಲಾಕ್ಷಗೌಡ, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಇಲಿಯಾಜ್‌ ಖಾನ್‌, ಮುಖಂಡರಾದ ಆರ್‌.ಎ.ಪಿ ನಾರಾಯಣಸ್ವಾಮಿ, ಮುನಿರೆಡ್ಡಿ, ಕೆ.ಆರ್‌.ಬಿ ಬೆ„ಚೇಗೌಡ, ನಾಗಣ್ಣ, ಬಿ.ಶ್ರೀನಿವಾಸಪ್ಪ, ಸಿ.ಎಂ ಮುನಿಯಪ್ಪ, ಮಂಜುನಾಥ್‌,ಶಿವಕುಮಾರ್‌, ನರೇಶ್‌, ಲಕ್ಷ್ಮೀ ಪತಿ, ಮುನಿಸ್ವಾಮಿಗೌಡ, ನಾಗರಾಜ್‌, ಅಂಜನಗೌಡ, ಅಭಿಷೇಕ್‌, ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next