Advertisement

ಉಸ್ತುವಾರಿ ಸಚಿವರ ಕಾರ್ಯ ಮೆಚ್ಚಿ ಬಿಜೆಪಿ ಸೇರಿದ ಚೀಡಚಿಕ್ಕನಹಳ್ಳಿಯ ಜೆಡಿಎಸ್ ಮುಖಂಡರು

05:02 PM Nov 16, 2020 | sudhir |

ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ನೇತೃತ್ವದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ತಾಲೂಕಿನ ಅಗಲಗುರ್ಕಿ ಪಂಚಾಯ್ತಿ ಚೀಡಚಿಕ್ಕನಹಳ್ಳಿ ಗ್ರಾಮದ ಜೆ.ಡಿ.ಎಸ್ ಮುಖಂಡರು ಇಂದು ಜಿ.ಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರ ಸಮ್ಮುಖದಲ್ಲಿ ಬಿ.ಜೆ.ಪಿ ಗೆ ಸೇರ್ಪಡೆಯಾದರು.

Advertisement

ತಾಲೂಕಿನ ಚೀಡಚಿಕ್ಕನಹಳ್ಳಿ ಗ್ರಾಮದ ಮರಿಯಪ್ಪ, ಹೋಟಲ್ ಮಂಜು, ರಾಜಣ್ಣ, ನಾರಾಯಣಸ್ವಾಮಿ, ಮುನಿರಾಜು(ಜಗ್ಗು), ಶಿವಶಂಕರ್, ಡೈರಿ ಮೂರ್ತಿ, ನವೀನ್ ಮೂರ್ತಿ, ಚಿಕ್ಕಕಲ್ಲಪ್ಪ, ಕೃಷ್ಣಪ್ಪ, ಚಂದ್ರಶೇಖರ್, ನಾರಾಯಣಸ್ವಾಮಿ, ಮುನಿರಾಜು, ಮುನಿರೆಡ್ಡಿ, ವೆಂಕಟೇಶ್, ಕೇಶವಮೂರ್ತಿ, ವೆಂಕಟೇಶ್ (ಸುಬ್ಬಮ್ಮ), ದೇವರಾಜ್, ಮೆಂಬರ್ ಸೀನಪ್ಪ, ನಾರಾಯಣಸ್ವಾಮಿ, ಕಿಟ್ಟ(ಮುನಿಯಪ್ಪ), ದರ್ಶನ್ ಗೌಡ, ಸಿ.ಎನ್.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಇಂದು ಬಿ.ಜೆ.ಪಿ ಗೆ ಸೇರ್ಪಡೆಯಾದರು.

ಇದನ್ನೂ ಓದಿ:ಮಜೂರು: ಕಲಬೆರಕೆ ಜೇನುತುಪ್ಪ ಮಾರಾಟ ಜಾಲವನ್ನು ಭೇದಿಸಿದ ಸ್ಥಳೀಯರು!ಯುವಕರು ಪೊಲೀಸರ ವಶಕ್ಕೆ

ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಆರ್.ನಾರಾಯಣಸ್ವಾಮಿ, ಮುಖಂಡರಾದ ಪಿ.ಎನ್.ಚನ್ನಕೃಷ್ಣಾರೆಡ್ಡಿ, ಚಾಕಿಸೆಂಟರ್ ಕಿಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next