Advertisement

JDS ಸಭೆ: ಇಬ್ರಾಹಿಂ ವಿರುದ್ಧ ಕ್ರಮ?

11:17 PM Oct 18, 2023 | Team Udayavani |

ಬೆಂಗಳೂರು: ಒರಿಜಿನಲ್‌ ಜೆಡಿಎಸ್‌, ಉಚ್ಚಾಟನೆ, ವಜಾ ನಕಲಿ ಪತ್ರಗಳು ಕಾವು ಪಡೆದಿರುವ ಹೊತ್ತಲ್ಲೇ ಜೆಡಿಎಸ್‌ ರಾಜ್ಯ ಪರಿಷತ್‌ ಹಾಗೂ ಕೋರ್‌ ಕಮಿಟಿ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.

Advertisement

ಪಕ್ಷದ ಸಂಘಟನಾತ್ಮಕ ವಿಚಾರಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಅಧಿಕೃತ ಅಧಿಕಾರ ಹೊಂದಿರುವ ರಾಜ್ಯ ಪರಿಷತ್‌ (ಸ್ಟೇಟ್‌ ಕೌನ್ಸಿಲ್‌) ಸಭೆ ಕರೆದಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಲ್‌. ಭೋಜೇಗೌಡ ಈ ಸಭೆ ಕರೆದಿದ್ದು, ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರಿಗೆ ಆಹ್ವಾನವಿಲ್ಲ.

ಬಿಜೆಪಿ ಜತೆಗಿನ ಮೈತ್ರಿ ಬಳಿಕ ನಡೆದಿರುವ ಬೆಳವಣಿಗೆಗೆಗಳು ಮುಖ್ಯವಾಗಿ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಇತ್ತಿಚಿಗೆ ಚಿಂತನ-ಮಂಥನ ನಡೆಸಿರುವ ವಿಚಾರ, ಅವರು ಆಡಿರುವ ಮಾತುಗಳು ಸಭೆಯ ಮುಖ್ಯ ಅಜೆಂಡಾ ಆಗಿದ್ದು, ಈ ಬೆಳವಣಿಗೆಗಳ ಬಗ್ಗೆ ಶಿಸ್ತು ಕ್ರಮ ಸೇರಿದಂತೆ ಪಕ್ಷ ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next