Advertisement

ಕುಮಾರಸ್ವಾಮಿ ರಣತಂತ್ರ : ಸಿದ್ದರಾಮಯ್ಯ ಭೇಟಿಯಾದ ಜೆಡಿಎಸ್ ನಿಯೋಗ !

03:03 PM Jun 01, 2022 | Team Udayavani |

ಬೆಂಗಳೂರು : ರಾಜ್ಯಸಭೆಯ ಒಂದು ಸ್ಥಾನ ಗೆಲ್ಲಲು ಜೆಡಿಎಸ್ ತೀವ್ರ ಕಸರತ್ತು ಆರಂಭಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಯೋಗ ಭೇಟಿ ಮಾಡಿ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಲು ಮನವಿ ಮಾಡಿದೆ.

Advertisement

ಜೆಡಿಎಸ್ ನಾಯಕರಾದ , ಶರವಣ ಬಿ.ಎಂ.ಫಾರೂಕ್‌ ವಿಧಾನ ಪರಿಷತ್‌ ಜೆಡಿಎಸ್‌ ಅಭ್ಯರ್ಥಿ ಟಿ.ಎ.ಶರವಣ ಅವರ ನಿಯೋಗ ಭೇಟಿ ಮಾಡಿ ಬೆಂಬಲ ಯಾಚಿಸಿದೆ.

ಬಿಜೆಪಿಗೆ ಅನುಕೂಲ ಮಾಡುತ್ತಿರುವುದು ಕಾಂಗ್ರೆಸ್

ಜೆಡಿಎಸ್ ಉಪನಾಯಕ ಬಂಡೆಪ್ಪ ಖಾಶೆಂಪುರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈಗ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚುವರಿ ಎರಡನೇ ಅಭ್ಯರ್ಥಿ ಹಾಕಿದ್ದಾರೆ.ನಮ್ಮ ವರಿಷ್ಠರಾದ ದೇವೇಗೌಡರು ಮತ್ತು ಸೋನಿಯಾ ಗಾಂಧಿ ಇಬ್ಬರೂ ಮಾತಾಡಿದ್ದಾರೆ.ಅವರ ಬಳಿ ಸಂಖ್ಯೆ ಇಲ್ಲ,ಆದರೂ ಅಭ್ಯರ್ಥಿ ಹಾಕಿ ಗೊಂದಲ ಮಾಡಿದ್ದಾರೆ. ಬಿಜೆಪಿಗೆ ಅನುಕೂಲ ಮಾಡುತ್ತಿದ್ದಾರೆ ಎಂದರು.

ಈಗಲೂ ಕಾಲ ಮಿಂಚಿಲ್ಲ ಸಮಯ ಇದೆ. ಜಾತ್ಯತೀತ ಪಕ್ಷಕ್ಕೆ ಬೆಂಬಲ ನೀಡಿ. ಕಳೆದ ಬಾರಿ ಖರ್ಗೆ ಅವರು ಬೆಂಬಲ ಕೊಟ್ಟಿದ್ದರು ಎಂದರು.

Advertisement

ಜೆಡಿಎಸ್ ನಿಯೋಗ ಸಿದ್ದರಾಮಯ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರೇವಣ್ಣ ಏನು ಹೇಳುತ್ತಾರೆ ನೋಡೋಣ. ಪಕ್ಷ ಏನು ಹೇಳುತ್ತದೆ ಅದರಂತೆ ನಡೆಯುತ್ತೇವೆ. ಸಂಖ್ಯಾ ಬಲದಲ್ಲಿ ಎಲ್ಲರಿಗಿಂತ ನಮ್ಮದು ಹೆಚ್ಚಿದೆ. ಎರಡನೇ ಪ್ರಾಶಸ್ತ್ಯದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಕುದುರೆ ವ್ಯಾಪಾರವೇನಿಲ್ಲ ಎಂದರು.

ಅವರ ಪಕ್ಷದ ನಾಯಕರೊಬ್ಬರು ಹೇಳುತ್ತಿದ್ದರು ಪಕ್ಷ ನಿಷ್ಠೆ ಅಂತ. ಗೆಲ್ಲೋದು ಒಂದು ಕಡೆ, ಇರುವುದು ಒಂದು ಕಡೆ ಎಂದರು.

ಕಾಂಗ್ರೆಸ್ ಶಾಸಕ ಜಮೀರ್ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಬ್ಬರು ಅವರ ಜತೆ ಇರಬಹುದು.ಯಾವುದೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಬೇಡ. ಬಿಜೆಪಿಗೆ ಇನ್ನೊಂದು ಸೀಟು ಗೆಲ್ಲುವುದು ಬೇಡ. ಈಗಲೂ ಕಾಲ ಮಿಂಚಿಲ್ಲ, ಕಾಂಗ್ರೆಸ್ ಜೆಡಿಎಸ ನ್ನು ಬೆಂಬಲಿಸಲಿ.ಹಿಂದೆ ಮಾಡಿದವರ ಪರಿಸ್ಥಿತಿ ಏನಾಗಿದೆ ಈಗ ನೀವೇ ನೋಡುತ್ತಿದ್ದೀರಾ. ಕುಮಾರಸ್ವಾಮಿ ಅವರು ಬರುತ್ತಾರೆ, ಬಂದ ಬಳಿಕ ರಣತಂತ್ರ ರೂಪಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next