Advertisement

ನೆಟ್ಲಮುಟ್ನೂರು: ಹಳೆ ಶೌಚಾಲಯದ  ಗುಂಡಿಗೆ ಬಿದ್ದು ಜೆಸಿಬಿ ಆಪರೇಟರ್‌ ಸಾವು

05:03 PM Jul 12, 2019 | Team Udayavani |

ವಿಟ್ಲ: ನೆಟ್ಲಮುಟ್ನೂರು ಗ್ರಾಮದ ಪರ್ಲೊಟ್ಟಿ ನಲ್ಲಿ ಹಳೆಯ ಶೌಚಾಲಯದ ಗುಂಡಿಗೆ ಆಕಸ್ಮಿಕವಾಗಿ ಬಿದ್ದು ಜೆಸಿಬಿ ಆಪರೇಟರ್‌ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ. ಇಡಿದು ಗ್ರಾಮದ ಮಿತ್ತೂರು ಬೊಲ್ಲರಮಜಲು ನಿವಾಸಿ ರಾಮ ಸಫಲ್ಯ ಅವರ ಪುತ್ರ ರಾಜೇಶ್‌ (30) ಮೃತಪಟ್ಟವರು.

Advertisement

ಪೆರ್ಲೊಟ್ಟಿನ ವ್ಯಕ್ತಿಗೆ ಸೇರಿದ ಜಾಗದಲ್ಲಿ ಸಮತಟ್ಟು ಮಾಡಲೆಂದು ಎರಡು ದಿನದ ಮಟ್ಟಿಗೆ ತಾತ್ಕಾಲಿಕ ಕೆಲಸಕ್ಕೆಂದು ರಾಜೇಶ್‌ ಅವರು ಬೆಳಗ್ಗೆ 8.30ಕ್ಕೆ ತೆರಳಿದ್ದರು. ಇದೇ ಸ್ಥಳದಲ್ಲಿದ್ದ ಹಳೆಯ ಶೌಚಾಲಯ ಹೊಂಡದ ಮೇಲ್ಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದರೊಳಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೊಂಡವು ಕೊಳಚೆ ನೀರಿನಿಂದ ತುಂಬಿತ್ತು.

ಅವರ ಮೊಬೈಲ್‌ ಈ ಹೊಂಡದ ಸಮೀಪದಲ್ಲೇ ಬಿದ್ದಿತ್ತು. ಸ್ವಲ್ಪ ಹೊತ್ತಿನ ಬಳಿಕ ಅದು ರಿಂಗ್‌ ಆದಾಗ ಪಕ್ಕದ ಮನೆಯವರು ಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೇಲೆತ್ತಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next