Advertisement

‘ಜಯಭೇರಿ ಕನ್ನಡ’ ಹಾಡು ಬಂತು

03:02 PM Nov 13, 2023 | Team Udayavani |

“ಜಯಭೇರಿ ಕನ್ನಡ’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಡಾ.ಶೈಲೇಶ್‌ ಕುಮಾರ್‌ ನಿರ್ಮಾಣದ ಈ ಹಾಡನ್ನು ಡಾ.ಶಶಿಕಲಾ ಪುಟ್ಟಸ್ವಾಮಿ ಅವರು ಬರೆದು ನಿರ್ದೇಸನ ಮಾಡಿದ್ದಾರೆ. ಸಾಯಿಕಿರಣ್‌ ಸಂಗೀತ ನೀಡಿದ್ದಾರೆ. ಹೇಮಂತ್‌ ಕುಮಾರ್‌, ಅನಿರುದ್ಧ್ ಶಾಸ್ತ್ರಿ, ಅನುರಾಧ ಭಟ್‌ ಹಾಡಿದ್ದಾರೆ. ಯಶಸ್‌ ಸೂರ್ಯ, ನಿಶ್ವಿ‌ಕಾ ನಾಯ್ಡು, ಕಿರಣ್‌ ರಾಜ್, ವೀಣಾ ಪೊನ್ನಪ್ಪ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

“ನನಗೆ ಈ ಸಮಾಜ ಸಾಕಷ್ಟು ಕೊಟ್ಟಿದೆ. ನಾನು ಸಮಾಜಕ್ಕೆ ಏನಾದರೂ ಮಾಡಬೇಕೆಂದು ಹಾಗೂ ಕನ್ನಡದ ಮೇಲಿನ ಭಾಷಾಭಿಮಾನದಿಂದ ಜಯಭೇರಿ ಕನ್ನಡ ಎಂಬ ಕನ್ನಡದ ಹಿರಿಮೆ ಸಾರುವ ಹಾಡೊಂದನ್ನು ನಿರ್ಮಾಣ ಮಾಡಿದ್ದೇನೆ. ಡಾ. ಶಶಿಕಲಾ ಪುಟ್ಟಸ್ವಾಮಿ ಈ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ’ ಎನ್ನುವುದು ಡಾ.ಶೈಲೇಶ್‌ ಮಾತು.

“ನನಗೆ ಶೈಲೇಶ್‌ ಕುಮಾರ್‌ ಅವರು ಈ ರೀತಿ ಕನ್ನಡದ ಹಾಡೊಂದರಲ್ಲಿ ಅಭಿನಯಿಸಬೇಕೆಂದು ಕೇಳಿದರು. ಕನ್ನಡದ ಮೇಲಿನ ಅಭಿಮಾನದಿಂದ ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಹಾಡು ಚೆನ್ನಾಗಿದೆ’ ಎನ್ನುವುದು ನಿಶ್ವಿ‌ಕಾ ಮಾತು

Advertisement

Udayavani is now on Telegram. Click here to join our channel and stay updated with the latest news.

Next