Advertisement

ತಾಲಿಬಾನ್ ಗೆ ಆರ್ ಎಸ್ ಎಸ್ ಹೋಲಿಕೆ: ಜಾವೇದ್ ಅಖ್ತರ್ ವಿರುದ್ಧ ಶಿವಸೇನಾ ಆಕ್ರೋಶ

04:00 PM Sep 06, 2021 | Team Udayavani |

ನವದೆಹಲಿ: ಖ್ಯಾತ ಸಾಹಿತಿ, ಚಿತ್ರ ಕಥೆಗಾರ ಜಾವೇದ್ ಅಖ್ತರ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್ ಗೆ ಹೋಲಿಕೆ ಮಾಡಿರುವುದು ಸಂಪೂರ್ಣವಾಗಿ ತಪ್ಪು ಎಂದು ಮಹಾರಾಷ್ಟ್ರದಲ್ಲಿ ಎನ್ ಸಿಪಿ ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಪ್ರತಿಕ್ರಿಯೆ ನೀಡಿದೆ.

Advertisement

ಇದನ್ನೂ ಓದಿ:ಬೊಮ್ಮಾಯಿ ನಾಯಕತ್ವ ವಹಿಸಿದ ಒಂದೇ ತಿಂಗಳಲ್ಲಿ ಸಿಕ್ಸರ್ ಹೊಡೆದಿದ್ದಾರೆ: ಮುರುಗೇಶ್ ನಿರಾಣಿ

ಹಿಂದೂ ರಾಷ್ಟ್ರದ ಕಲ್ಪನೆಯನ್ನು ನೀವು(ಅಖ್ತರ್) ಹೇಗೆ ತಾಲಿಬಾನ್ ಮನಸ್ಥಿತಿಗೆ ಹೋಲಿಸುತ್ತೀರಿ? ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ತಿಳಿಸಿದೆ.

ಹಿಂದುತ್ವದ ಹೆಸರಿನಲ್ಲಿನ ಹುಚ್ಚತನವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಿದೆ. ಆರ್ ಎಸ್ ಎಸ್ ಅನ್ನು ತಾಲಿಬಾನ್ ಗೆ ಹೋಲಿಕೆ ಮಾಡಿರುವುದು ಹಿಂದೂ ಸಂಸ್ಕೃತಿಯನ್ನು ಅಗೌರವಿಸಿದಂತೆ ಎಂದು ಶಿವಸೇನೆ ತಿರುಗೇಟು ನೀಡಿದೆ.

ಭಾರತ ಪ್ರಜಾಪ್ರಭುತ್ವ ದೇಶ, ಸಹಿಷ್ಣುತೆಯನ್ನು ಹೊಂದಿದೆ. ಯಾವುದೇ ಕಾರಣಕ್ಕೂ ಇಸ್ಲಾಂ ಮೂಲಭೂತವಾದಿಗಳ ಜತೆ ಹೋಲಿಕೆ ಮಾಡಬೇಡಿ ಎಂದು ಶಿವಸೇನೆ ಜಾವೇದ್ ಅಖ್ತರ್ ಗೆ ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.

Advertisement

ಇತ್ತೀಚೆಗೆ ಜಾವೇದ್ ಅಖ್ತರ್ ನ್ಯೂಸ್ ಚಾನೆಲ್ ವೊಂದರ ಜತೆ ಮಾತನಾಡುತ್ತ, ಬಲಪಂಥೀಯ ಸಂಘಟನೆಯು ಕೂಡಾ ತಾಲಿಬಾನ್ ರೀತಿ ಇಸ್ಲಾಮಿಕ್ ದೇಶವನ್ನು ಹೊಂದುವ ಮನಸ್ಥಿತಿಯಂತೆ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next