Advertisement

ಕೋವಿಡ್-19 ಎಚ್ಚರಿಕೆ ಮಧ್ಯೆಯೂ ಪೊಲೀಸರು ಜನಪ್ರತಿಧಿಗಳ ಗುಂಪು ಫೋಟೋ

01:30 PM Apr 21, 2020 | keerthan |

ಗಂಗಾವತಿ: ಕೋವಿಡ್-19 ರೋಗ ಹರಡದಂತೆ ಗುಂಪು ಸೇರದೆ ಭೌತಿಕ ಅಂತರ ಕಾಪಾಡಿಕೊಳ್ಳುವ ಎಚ್ಚರಿಕೆ ಮಧ್ಯೆಯೂ ನಗರದಲ್ಲಿ ಕೋವಿಡ್ ಜನಜಾಗೃತಿ ಸೈಕಲ್ ಜಾಥ ನಡೆಸಿದ ನಂತರ ಪೊಲೀಸರು ಜನಪ್ರತಿನಿಧಿಗಳು ಮತ್ತು ಗೋ ಗ್ರೀನ್ ಸೈಕಲ್ ತಂಡದವರು ಭೌತಿಕ ಅಂತರ ಕಾಪಾಡದೇ ನಗರದ ಗಾಂಧಿ ಚೌಕಿನಲ್ಲಿ ಗುಂಪು ಪೋಟೊ ತೆಗೆಸಿಕೊಂಡು ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ್ದಾರೆ.

Advertisement

ಮಂಗಳವಾರ ಗೋಗ್ರೀನ್ ಸೈಕಲ್ ತಂಡ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಕೋವಿಡ್-19 ವೈರಸ್ ಜನಜಾಗೃತಿ ಜಾಥವನ್ನು ಆಯೋಜನೆ ಮಾಡಲಾಗಿತ್ತು ಇದರಲ್ಲಿ ಶಾಸಕ ಪರಣ್ಣ ಮುನವಳ್ಳಿ, ಡಿವೈಎಸ್ ಪಿ ಡಾ.ಚಂದ್ರಶೇಖರ ಹಾಸ್ಯ ಭಾಷಣಕಾರ ಬಿ.ಪ್ರಾಣೇಶ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ವರ್ತಕರು ಸೇರಿದ್ದರು.

ನಗರದಾದ್ಯಂತ ಸೈಕಲ್ ನಲ್ಲಿ ಸುತ್ತಾಡಿ ಕೊನೆಗೆ ಗಾಂಧಿ ಚೌಕಿನಲ್ಲಿ 50ಕ್ಕೂ ಹೆಚ್ಚು ಜನರು ಸೇರಿ ಗುಂಪು ಪೊಟೊ ತೆಗೆಸಿಕೊಂಡರು ಇವರಲ್ಲಿ ಯಾರು ಸಹ ಸಾಮಾಜಿಕ ಅಂತರ ಕಾಪಾಡಲಿಲ್ಲ. ಜನಸಾಮಾನ್ಯರಿಗೆ ಸಾಮಾಜಿಕ ಅಂತರದ ಬಗ್ಗೆ ಉಪದೇಶ ಮಾಡುವ ಅಧಿಕಾರಿಗಳು ಜನಪ್ರತಿನಿಧಿಗಳು, ಪೊಲೀಸರು ತಾವೇ ಪಾಲನೆ ಮಾಡದಿರುವ ಕುರಿತು ಸಾರ್ವಜನಕರ ಆಕ್ರೋಶಕ್ಕೆ ಕಾರಣವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next