Advertisement

ಹಂಪಿಗೆ ತೆಪ್ಪದಲಿ ಹೊರಟ ಹೂ

11:37 AM Jul 29, 2019 | mahesh |

“ಯಾವ ಬಳ್ಳಿಯ ಹೂವು ಯಾವ ದೇವರ ಮುಡಿಗೋ?’ ಎಂಬ ಮಾತಿದೆ. ಆದರೆ, ಕೆಲವು ಶತಮಾನಗಳ ಹಿಂದೆ, ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಮಲ್ಲಿಗೆಯ ಹೂಗಳಿಗೆ ತಾವು ತಲುಪುವ ಜಾಗ ಸ್ಪಷ್ಟವಾಗಿ ತಿಳಿದಿತ್ತು. ಅದು ವಿಜಯನಗರ ಸಾಮ್ರಾಜ್ಯವು ಉತ್ತುಂಗದಲ್ಲಿದ್ದ ಕಾಲ. ಹಂಪಿಯ ಆರಾಧ್ಯ ದೈವ ವಿರೂಪಾಕ್ಷ, ಅಧಿದೇವತೆ ಪಂಪಾಂಬಿಕೆಯರ ನಿತ್ಯ ಪೂಜೆಗೆ, 84 ಕಿ.ಮೀ. ದೂರವಿದ್ದ ಈ ಪ್ರದೇಶದಿಂದ ಹೂವನ್ನು ತೆಪ್ಪದಲ್ಲಿ ಸಾಗಿಸಲಾಗುತ್ತಿತ್ತು ಎಂಬ ಐತಿಹ್ಯವಿದೆ. ಅಲ್ಲದೇ, ಅದಕ್ಕೂ ಮೊದಲೇ ಕಲ್ಯಾಣಿ ಚಾಲುಕ್ಯರ ರ ದೊರೆ 6ನೇ ವಿಕ್ರಮಾದಿತ್ಯನ ಕಾಲದಲ್ಲಿ, ಹೂವಿಗೆ ಪ್ರಸಿದ್ಧವಾಗಿದ್ದ ಈ ಊರಿಗೆ “ಪೂವಿನ ಪಡಂಗಿಲೆ’ ಅಂತಲೇ ಕರೆಯಲಾಗುತ್ತಿತ್ತಂತೆ. ಸುತ್ತಮುತ್ತಲಿನ ಕ್ಷೇತ್ರಗಳಿಗೆ ಇಲ್ಲಿನ ಮಲ್ಲಿಗೆಯೇ ಶ್ರೇಷ್ಠ ಎಂಬ ನಂಬಿಕೆಯೂ ಇತ್ತು. ಈಗಲೂ ಇಲ್ಲಿನ ಮಲ್ಲಿಗೆ ಹೂವಿಗೆ ಅಪಾರ ಬೇಡಿಕೆ ಕಾಣಬಹುದು.

Advertisement

ತಾರಾ ಮಂಜೇಶ್‌, ಹೊಸಪೇಟೆ

Advertisement

Udayavani is now on Telegram. Click here to join our channel and stay updated with the latest news.

Next