Advertisement

ಜಪ್ಪಿನಮೊಗರು: ಮುಂದುವರಿದ ರಾಜಕಾಲುವೆ ಒತ್ತುವರಿ ತೆರವು

12:06 AM May 30, 2020 | Sriram |

ಮಂಗಳೂರು: ರಾಜ ಕಾಲುವೆಗಳ ಒತ್ತುವರಿ ಆಗಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಪಾಲಿಕೆ ಮತ್ತೊಮ್ಮೆ ಕಾರ್ಯಾ ಚರಣೆಗೆ ಇಳಿದಿದೆ. ಜಪ್ಪಿನ ಮೊಗರು ಭಾಗದಲ್ಲಿಯೇ ಮತ್ತೆ ಬುಲ್ಡೋಜರ್‌ ಸಹಾಯದಿಂದ ರಾಜಕಾಲುವೆ ಒತ್ತುವರಿಯನ್ನು ಶುಕ್ರವಾರ ತೆರವು ಮಾಡಲಾಯಿತು.

Advertisement

ಸಾರ್ವಜನಿಕರ ದೂರಿನ ಮೇರೆಗೆ ಮೇ 26ರಂದು ಮೇಯರ್‌ ದಿವಾಕರ ಪಾಂಡೇಶ್ವರ ಹಾಗೂ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಅವರ ತಂಡವು ತೆರವು ಕಾರ್ಯಾಚರಣೆ ಆರಂಭಿಸಿತ್ತು. ಇದರ ಮುಂದುವರಿದ ಭಾಗವಾಗಿ ಶುಕ್ರವಾರವೂ ತೆರವು ಕಾರ್ಯ ನಡೆಯಿತು.

ಜಪ್ಪಿನಮೊಗರು ಭಾಗದ ಹೆದ್ದಾರಿಯ ಎಡಭಾಗದಲ್ಲಿ ಕೆಲವರು ರಾಜಕಾಲುವೆಯನ್ನು ಒತ್ತುವರಿ ಮಾಡಿದ ಬಗ್ಗೆ ಸ್ಥಳೀಯರ ದೂರಿನ ಮೇರೆಗೆ ಮೇಯರ್‌ ಹಾಗೂ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ತೆರವು ನಡೆಸಿದೆ.

ಮಳೆಗಾಲ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ರಾಜಕಾಲುವೆಗಳನ್ನು ಸುಸ್ಥಿತಿಯಲ್ಲಿ ಇರಿಸುವಂತೆ ನೋಡಿ ಕೊಳ್ಳುವುದು ಪಾಲಿಕೆ ಜವಾಬ್ದಾರಿ. ರಾಜ ಕಾಲುವೆ ಸರಿ ಇಲ್ಲದಿದ್ದರೆ ಮಳೆನೀರಿನ ಸಮಸ್ಯೆ ಕಾಡುವ ಅಪಾಯವಿದೆ. ಇದರ ಬಗ್ಗೆ ಪರಿಶೀಲಿಸುವಾಗ ರಾಜ ಕಾಲುವೆ ಗಳನ್ನು ಅತಿಕ್ರಮಣ ಮಾಡಿದ ಸಂಗತಿ ಗೊತ್ತಾಗಿ, ಸ್ಥಳೀಯರ ಆಗ್ರಹದ ಮೇರೆಗೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿ ಕೊಳ್ಳಲಾಗಿದೆ. ರಾಜಕಾಲುವೆ ಒತ್ತುವರಿ ಆಗಿದ್ದರೆ ಅದನ್ನು ತೆರವು ಮಾಡುವ ನೆಲೆಯಲ್ಲಿ ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದು ಮೇಯರ್‌ ದಿವಾಕರ ಪಾಂಡೇಶ್ವರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next