Advertisement

Jansale: ಮನೆಯ ಬಾಗಿಲು ಮುರಿದ್ದು, ಲಕ್ಷಾಂತರ ರೂ.ನಗ-ನಗದು ಕಳವು

09:04 PM Oct 08, 2023 | Team Udayavani |

ಸಿದ್ದಾಪುರ: ಸಿದ್ದಾಪುರ ಗ್ರಾಮದ ಜನ್ಸಾಲೆ ಸುಕನ್ಯಾ ಕಿಣಿ ಅವರ ಮನೆಯ ಮುಂಬಾಗಿಲಿನ ಬೀಗ ಮುರಿದು, ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿದ ಘಟನೆಯು ಅ. 5ರಿಂದ ಅ. 8ರ ಮಧ್ಯೆ ನಡೆದಿದೆ.

Advertisement

ಸುಕನ್ಯಾ ಕಿಣಿ ಅವರು ಮನೆಗೆ ಬೀಗ ಹಾಕಿ ಅ. 5ರಂದು ಕುಟುಂಬ ಸಮೇತರಾಗಿ ತಿರುಪತಿ ದೇವರ ದರ್ಶನಕ್ಕೆ ತೆರಳಿದ್ದರು. ಅ. 8ರ ಬೆಳಗ್ಗೆ ಮನೆಗೆ ವಾಪಸಾದಾಗ ಮನೆಯ ಮುಂಬಾಗಿಲು ಒಡೆದು, ಕಳ್ಳತನ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ. ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಸಮೀಪದಲ್ಲಿ ಸುಕನ್ಯಾ ಕಿಣಿ ಅವರ ಮನೆ ಇದೆ. ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ ಕಳ್ಳತನ ನಡೆದಿದೆ.

ಮುಂಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯ ಒಳಗೆ ಜಾಲಾಡಿದ್ದಾರೆ. ಬೀಗ ಹಾಗೂ ಬಾಗಿಲಿಗೆ ಅಳವಡಿಸಿದ ಹುಕ್ಸ್‌ ಕಿತ್ತು ಬಂದಿದೆ. ಬೀಗ ಹಾಗೂ ಹುಕ್ಸ್‌ ಅನ್ನು ಮನೆಯ ಮುಂಭಾಗದಲ್ಲಿರುವ ಬಾವಿಗೆ ಎಸೆದಿದ್ದು, ಪೊಲೀಸರು ಅದನ್ನು ಆಯಸ್ಕಾಂತದ ಸಹಾಯದಿಂದ ಹೊರ ತೆಗೆದಿದ್ದಾರೆ. ಮನೆಯ ಒಳಗಿದ್ದ ಕಪಾಟಿನಲ್ಲಿದ್ದ 5 ಪವನ್‌ ತೂಕದ ಮುತ್ತಿನ ಹವಳ ಮಿಶ್ರಿತ ಚಿನ್ನ ಸರ, ಒಂದು ಪವನ್‌ ಚಿನ್ನದ ನಾಣ್ಯ, 10 ಸಾವಿರ ನಗದು, ಬೆಳ್ಳಿ ಸಾಮಗ್ರಿಗಳನ್ನು ಕಳವುಗೈಯಲಾಗಿದೆ.

ಶಂಕರನಾರಾಯಣ ಪೊಲೀಸ್‌ ಠಾಣೆಯ ನಾಸೀರ್‌ ಹುಸೇನ್‌ ಹಾಗೂ ಸಿಬಂದಿ ಘಟನ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞನರು, ಶ್ವಾನದಳ ಮತ್ತು ಅಪರಾಧ ಪತ್ತೆದಳ ಕೂಡ ಘಟನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next