Advertisement

ದಸರಾ ಮಹೋತ್ಸವಕ್ಕೆ ಜನಾರ್ದನ ಪೂಜಾರಿ ಭೇಟಿ

02:06 AM Oct 09, 2021 | Team Udayavani |

ಕುದ್ರೋಳಿ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಶುಕ್ರವಾರ ಸಂಜೆ ಮಂಗಳೂರು ದಸರಾ ಮಹೋತ್ಸವಕ್ಕೆ ಭೇಟಿ ನೀಡಿದರು.

Advertisement

ಮಂಗಳೂರು ದಸರಾ ಮಹೋತ್ಸವದ ರೂವಾರಿಯಾಗಿರುವ ಅವರು ಸಂಜೆ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಕ್ಷೇತ್ರಾಡಳಿತ ಮಂಡಳಿಯವರು ಬರಮಾಡಿಕೊಂಡರು. ಬಳಿಕ ದೇವರ ದರ್ಶನ ಮಾಡಿ, ನವದುರ್ಗೆ, ಶಾರದೆ ಪ್ರತಿಷ್ಠೆಯಾಗಿರುವ ದರ್ಬಾರು ಮಂಟಪಕ್ಕೆ ತೆರಳಿದರು.

ಸುಮಾರು 45 ನಿಮಿಷಗಳ ಕಾಲ ಅಲ್ಲೇ ಕುಳಿತು ಭಜನೆಯನ್ನು ವೀಕ್ಷಿಸಿದರು.

ಕ್ಷೇತ್ರದ ಉಪಾಧ್ಯಕ್ಷ ರವಿಶಂಕರ ಮಿಜಾರು, ಕೋಶಾಧಿಕಾರಿ ಪದ್ಮರಾಜ್‌ ಆರ್‌., ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಕಿಯೋನಿಕ್ಸ್‌ ಸಂಸ್ಥೆಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಉಪಸ್ಥಿತರಿದ್ದರು.

ಇದನ್ನೂ ಓದಿ:ಐಟಿ ದಾಳಿಗೆ ಮುಖ್ಯಮಂತ್ರಿ ಉತ್ತರದಾಯಿ: ಕಾಂಗ್ರೆಸ್‌ ಟ್ವೀಟ್‌

Advertisement

 

Advertisement

Udayavani is now on Telegram. Click here to join our channel and stay updated with the latest news.

Next