Advertisement

ಜನೌಷಧ ನಂಬಿ ಬಂದರೆ ಜೀವ ಉಳಿಯದು!

03:47 PM Sep 02, 2021 | Team Udayavani |

ಎಚ್‌.ಡಿ.ಕೋಟೆ: ಪಟ್ಟಣದಲ್ಲಿ ರಿಯಾಯಿತಿ ದರದಲ್ಲಿ ಮಾತ್ರೆ, ಟಾನಿಕ್‌ ಪೂರೈಸಲು ಜನೌಷಧಿ (ಜನರಿಕ್‌ ಮಳಿಗೆ) ಕೇಂದ್ರವನ್ನು
ತೆರೆಯಲಾಗಿದ್ದು, ನೆಪ ಮಾತ್ರಕ್ಕೆ ಕಾರ್ಯನಿರ್ವಹಿಸುತ್ತಿದೆ. ಸಕಾಲದಲ್ಲಿ ಮಳಿಗೆ ಬಾಗಿಲು ಕೂಡ ತೆರೆಯುವುದಿಲ್ಲ. ಜನರಿಗೆ ಅಗತ್ಯವಿರುವ ಔಷಧಗಳು ಕೂಡ ಸಿಗುತ್ತಿಲ್ಲ. ಕೆಲವೇ ಕೆಲವು ಮಾತ್ರೆಗಳ ದಾಸ್ತಾನು ಇರುವುದರಿಂದ ಜನರಿಗೆ ಅಷ್ಟೇನು ಉಪಯೋಗ ಆಗುತ್ತಿಲ್ಲ. ಜನೌಷಧಿ ಕೇಂದ್ರದ ಆಶಯವೇ ಈಡೇರುತ್ತಿಲ್ಲ.

Advertisement

ನಿಯಮಾನುಸಾರು ಜನೌಷಧ ಮಳಿಗೆಯಲ್ಲಿ 1,500 ಔಷಧಗಳನ್ನು ಮಾರಾಟ ಮಾಡಲು ಅವಕಾಶವಿದೆ. ಆದರೆ, ಈ ಮಳಿಗೆಯಲ್ಲಿ ಅರ್ಧದಷ್ಟು ಔಷಧಗಳು ಕೂಡ ಸಿಗುವುದಿಲ್ಲ. ರಿಯಾಯಿತಿ ದರದಲ್ಲಿ ಔಷಧ ಸಿಗುತ್ತದೆ ಎಂದು ನಂಬಿ ಬಂದರೆ ಬರಿಗೈನಲ್ಲಿ ನಿರಾಸೆಯಿಂದ ಹೋಗಬೇಕಾದ ಪರಿಸ್ಥಿತಿ ಇದೆ. ಮಳಿಗೆ ಆರಂಭಿಸಿ ಮೂರ್‍ನಾಲ್ಕು ವರ್ಷಗಳು ಕಳೆದಿದ್ದರೂ ಇಂದಿಗೂನಾಮಫ‌ಲಕಅಳವಡಿಸಿಲ್ಲ.ಔಷಧ ಕೇಂದ್ರಇದೆಎಂಬುದೇ ಜನ ಸಾಮಾನ್ಯರಿಗೆ ತಿಳಿಯುತ್ತಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದ್ದರೂ ಇದ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ. ಈ ನಡುವೆ ಬೆರಳೆಣಿಕೆ ಯಷ್ಟು ಔಷಧಗಳು ಮಾತ್ರ ಲಭ್ಯವಿದ್ದು, ಜನರಿಗೆ ತುರ್ತು ಬೇಕಾದ ಮಾತ್ರೆಗಳೇ ಸಿಗುತ್ತಿಲ್ಲ.

ತಾಲೂಕಿನಲ್ಲಿ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಕ್ತದೊತ್ತಡ, ಮಧುಮೇಹ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೂಲಿ ಕಾರ್ಮಿಕರೇ ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿದ್ದು, ದುಬಾರಿ ಹಣ ಕೊಟ್ಟು ಮೆಡಿಕಲ್‌ ಸ್ಟೋರ್‌ಗಳಲ್ಲಿ ಔಷಧ ಖರೀದಿಸು ವಷ್ಟಆರ್ಥಿಕವಾಗಿ ಶಕ್ತರಲ್ಲ. ಜನೌಷಧಕೇಂದ್ರ ತೆರೆದಾಗಖುಷಿಪಟ್ಟಿದ್ದ ಜನರು ಇದೀಗ ತಮಗೆ ಬೇಕಾದ ಔಷಧ ಲಭಿಸದಕಾರಣ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿದೆ.

ಇದನ್ನೂ ಓದಿ:‘ಹ್ಯಾಪಿಲಿ ಮ್ಯಾರೀಡ್‌’ ಸ್ಟೋರಿ: ಪೃಥ್ವಿ ಅಂಬಾರ್‌-ಮಾನ್ವಿತಾ ಕಾಮತ್‌ ಜೋಡಿಯ ಹೊಸ ಚಿತ್ರ

ಜನೌಷಧ ಕೇಂದ್ರದ ಮುಂದೆ ಬೆಳಗ್ಗೆ 10 ಗಂಟೆಯಿಂದ ಕಾಯುತ್ತಿದ್ದೇನೆ. ಮಧ್ಯಾಹ್ನ ಕಳೆದರೂ ಬಾಗಿಲು ತೆರೆದಿಲ್ಲ. ಈ ದಿನ ರಜಾ ಎಂಬ ಮಾಹಿತಿ ಕೂಡ ಇರುವುದಿಲ್ಲ. ಸಮಯ ಪಾಲನೆಯೂ ಇರುವುದಿಲ್ಲ. ಬೇಕಾದ ಔಷಧಗಳು ಸಿಗುವುದಿಲ್ಲ. ಹೀಗೆ ಬೇಕಾಬಿಟ್ಟಿ ಸೇವೆ
ನೀಡುವುದಾದರೆ ಜನೌಷಧಕೇಂದ್ರವನ್ನಾದರೂ ಏಕೆ ತೆರೆಯಬೇಕಿತ್ತು ಎಂದು ಸ್ಥಳೀಯರಾದ ಉಮೇಶ್‌ ಜೀವಕ ಮತ್ತಿತರರು ಪ್ರಶ್ನಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಜನರಿಗೆ ಉತ್ತಮ ಸೇವೆ ಸಿಗುಂತೆ ಜನೌಷಧ ಮಳಿಗೆ
ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಜನೌಷಧ ಕೇಂದ್ರದ
ಆಶಯ ಈಡೇರಲಿ
ಜನರಿಗೆ ರಿಯಾಯಿತಿ ದರಲ್ಲಿ ಮಾತ್ರೆಗಳು, ಟಾನಿಕ್‌ಗಳು ತಲುಪಿಸುವ ಆಶಯದೊಂದಿಗೆಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಜನೌಷಧಕೇಂದ್ರ ತೆರೆಯಲಾಗಿದೆ. ಆದರೆ, ಇಲ್ಲಿ ಸೇವೆಯೇ ಅಸಮರ್ಪಕವಾಗಿದೆ. ಹೀಗಾಗಿ ಜನರು ಮಳಿಗೆಯ ಕಾರ್ಯವೈಖರಿಗೆ ಬೇಸತ್ತಿದ್ದಾರೆ. ಈ ಧೋರಣೆ ಯನ್ನು ಬದಲಿಸಿ ಕೊಂಡು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕಿದೆ. ಇಲ್ಲಿ ತೆರೆದಿರುವ ಮಳಿಗೆಗೆ ಮೊದಲ ನಾಮಫ‌ಲಕ ಅಳವಡಿಸಬೇಕು. ಸಕಾಲದಲ್ಲಿ ಬಾಗಿಲು ತೆರೆಯಬೇಕು. ಮಾರಾಟಗಾರರ ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಈ ಭಾಗದ ಜನರಿಗೆ ತುರ್ತು ಬೇಕಿರುವ ಔಷಧ ಗಳು ಸಿಗುವಂತಾಗಬೇಕು.ಕಾಲ ಕಾಲಕ್ಕೆ ಪರಿಶೀಲನೆ ನಡೆಸಿ ಎಲ್ಲ ರೀತಿಯ ಔಷಧ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಜನರು ಮೆಡಿಕಲ್‌ ಸ್ಟೋರ್‌ಗಳನ್ನು ಅವಲಂಬಿಸುವುದನ್ನು ತಪ್ಪಿಸಬೇಕಿದೆ.

ಎಚ್‌.ಡಿ.ಕೋಟೆ ತಾಲೂಕಿಗೆ ಜನ ಔಷಧಕೇಂದ್ರ ಮಂಜೂರಾಗಿರುವುದು ವರದಾನ. ಮಳಿಗೆಯಲ್ಲಿ 1,400ಕ್ಕೂ ಅಧಿಕ ಔಷಧಗಳನ್ನು ಮಾರಾಟ ಮಾಡಲು ಅವಕಾಶ ಇದೆ. ಆದರೆ, ಇಲ್ಲಿಕೇವಲ 400 ಔಷಧಗಳು ಮಾತ್ರ ಲಭ್ಯ ಇವೆ ಎಂಬ ಆರೋಪಗಳುಕೇಳಿ ಬಂದಿವೆ. ಈ ಕುರಿತು ಔಷಧ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರೂ ಉಪಯೋಗವಾಗಿಲ್ಲ.
-ಡಾ| ರವಿಕುಮಾರ್‌, ತಾಲೂಕು ಆರೋಗ್ಯಾಧಿಕಾರಿ

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next