Advertisement

ಜಮೀರ ಭಕ್ಷಿ ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

12:15 PM Jul 07, 2018 | |

ವಿಜಯಪುರ: ವಿಜಯಪುರ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಜಮೀರ ಭಕ್ಷಿ ಅವರನ್ನು ನೇಮಿಸಲಾಗಿದೆ.
ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ನೂತನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಮೀರಗೆ ಜಿಲ್ಲಾಧ್ಯಕ್ಷರಾದ ರವಿಗೌಡ ಪಾಟೀಲ ಪಕ್ಷದ ಧ್ವಜ ಹಾಗೂ ನೇಮಕಾತಿ ಆದೇಶದ ಪ್ರತಿ ನೀಡಿದರು.

Advertisement

ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಮೀರ ಬಕ್ಷಿ ಅವರು ಮುಂಬರುವ ಲೋಕಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆಗೆ ತೊಡಗಬೇಕು. ಚುನಾವಣೆಗಳಲ್ಲಿ ಪಕ್ಷಕ್ಕೆ ಅಧಿಕಾರ ತಂದುಕೊಡುವುದಕ್ಕಾಗಿ ತಮ್ಮ ಕ್ರಿಯಾಶೀಲ ಶಕ್ತಿ ತೊಡಗಿಸಬೇಕು ಎಂದು ಸೂಚಿಸಿದರು. ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ ಮುಶ್ರೀಫ ಮಾತನಾಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಜಮೀರ ಬಕ್ಷಿ ಅವರು ಪಕ್ಷನಿಷ್ಟರಾಗಿ ಸಂಘಟನೆ ಹಾಗೂ ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದಕ್ಕೆ ಇಂದು ಪಕ್ಷ ಮಹತ್ವದ ಹೊಣೆ ನೀಡಿದೆ.

ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ ಎಂದರು. ನೂತನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಮೀರ ಭಕ್ಷಿ ಮಾತನಾಡಿ, ಪಕ್ಷದ ಮುಖಂಡರು ನನಗೆ ನೀಡಿರುವ ನೂತನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.  ಮುಂಬರುವ ದಿನಗಳಲ್ಲಿ ನಗರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವುದಾಗಿ ಪಕ್ಷದ ಮುಖಂಡರಿಗೆ ಭರವಸೆ ನೀಡಿದರು. ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಪರವೇಜ ಚಟ್ಟರಕಿ, ಅಜೀತಸಿಂಗ ಪರದೇಸಿ, ಆಜಾದ ಪಟೇಲ, ಮಹಾದೇವಿ ಗೋಕಾಕ, ಮಂಜುಳಾ ಗಾಯವಾಡ, ಶರಣಪ್ಪ
ಯಕ್ಕುಂಡಿ, ಗಂಗುಬಾಯಿ ಧುಮಾಳೆ, ಆರ್‌.ಪಿ.ಶಾಪೂರ, ಸಮದ ಸುತಾರ, ವಸಂತ ಹೊನಮೋಡೆ, ಇರಫಾನ ಶೇಖ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next