Advertisement

ಕಾಶ್ಮೀರದಲ್ಲಿ ಶಾಂತಿ, ಹುರಿಯತ್‌ ಜತೆ ಮಾತುಕತೆ: ಷರೀಫ್ ಗೆ ಬುಖಾರಿ

05:17 PM Jul 15, 2017 | Team Udayavani |

ಹೊಸದಿಲ್ಲಿ : ದಿಲ್ಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಸೈಯದ್‌ ಬುಖಾರಿ ಅವರು ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರಿಗೆ ಪತ್ರ ಬರೆದು ಕಾಶ್ಮೀರ ಕಣಿವೆಯಲ್ಲಿನ ಉದ್ರಿಕ್ತ ಸ್ಥಿತಿಯನ್ನು ಕೊನೆಗೊಳಿಸುವುದಕ್ಕೆ ತಮ್ಮ ಅಧಿಕಾರ ಬಳಸಬೇಕೆಂದೂ ಹುರಿಯತ್‌ ಪ್ರತಿನಿಧಿಗಳೊಂದಿಗೆ ಮಾತುಕತೆಯನ್ನುಆರಂಭಿಸಬೇಕೆಂದೂ ವಿನಂತಿಸಿದ್ದಾರೆ.

Advertisement

“ಕಾಶ್ಮೀರ ಕಣಿವೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದರಿಂದಾಗಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಉದ್ರಿಕ್ತತೆ ಹೆಚ್ಚುತ್ತಿದೆ. ಕಾಶ್ಮೀರದಲ್ಲಿ ಶಾಂತಿಯನ್ನು ಮರು ಸ್ಥಾಪಿಸುವಲ್ಲಿ ಉಂಟಾಗುವ ಯಾವುದೇ ವಿಳಂಬದಿಂದ ಅಲ್ಲಿನ ಪರಿಸ್ಥಿತಿ ಇನ್ನಷ್ಟು ತೀವ್ರವಾಗಿ ಹದಗೆಡಲಿದೆ” ಎಂದು ಬುಖಾರಿ ಅವರು ಪತ್ರದಲ್ಲಿ  ಕಳವಳ ವ್ಯಕ್ತಪಡಿಸಿದ್ದಾರೆ. 

”ಹಿಂದೊಮ್ಮೆ ಕಾಶ್ಮೀರವು ಭೂಮಿಯ ಮೇಲಿನ ಸಾಕ್ಷಾತ್‌ ಸ್ವರ್ಗವಾಗಿತ್ತು. ಅತ್ಯಂತ ಸಂತಸದ ಬದುಕಿನ ತಾಣವಾಗಿತ್ತು. ಆದರೆ ಇಂದು ಅದು  ಸಹಸ್ರಾರು ಜನರ ಕಣ್ಣೀರಿನ ನಾಡಾಗಿದೆ. ಎಕೆ-47 ರೈಫ‌ಲ್‌ಗ‌ಳ ನೆರಳಿನಲ್ಲಿ ಜನರ ಬದುಕು ಸಾಗುತ್ತಿದೆ. ಕಾಶ್ಮೀರವನ್ನು ಮತ್ತೆ ಭೂಮಿಯ ಮೇಲಿನ ಸ್ವರ್ಗವನ್ನಾಗಿ ಮಾಡಲು ಅಲ್ಲಿ ಶಾಂತಿಯನ್ನು ಪುನರ್‌ ಸ್ಥಾಪಿಸಬೇಕಾಗಿದೆ ಮತ್ತು ಅದಕ್ಕಾಗಿ ಮಾತುಕತೆ ನಡೆಯಬೇಕಿದೆ” ಎಂದು ಬುಖಾರಿ ಪತ್ರದಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next