Advertisement

ಸಚಿವ ಜವಾಬ್ದಾರಿ ಬೇಡವೆಂದ ಜೇಟ್ಲಿ

02:33 AM May 30, 2019 | Team Udayavani |

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಕಾರಣದಿಂದಾಗಿ ನನ್ನ ಚಿಕಿತ್ಸೆ ಮತ್ತು ಚೇತರಿಕೆಗಾಗಿ ಸಮಯ ಬೇಕಿದೆ. ಹೀಗಾಗಿ ನನ್ನನ್ನು ಹೊಸ ಸರ್ಕಾರದಲ್ಲಿ ಸಚಿವನನ್ನಾಗಿ ಮಾಡಬೇಡಿ ಎಂದು ಕಳೆದ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಅರುಣ್‌ ಜೇಟ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

Advertisement

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ, ನರೇಂದ್ರ ಮೋದಿ ಸಂಪುಟದಲ್ಲಿ ಯಾರ್ಯಾರು ಸಚಿವರು ಇರುತ್ತಾರೆ ಎಂಬ ಬಗ್ಗೆ ಕುತೂಹಲ ಮೂಡಿತ್ತು. ಅದರಂತೆ ಕಳೆದ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಅರುಣ್‌ ಜೇಟ್ಲಿಯವರನ್ನು ಅನಾರೋಗ್ಯದ ಕಾರಣದಿಂದ ಕೈಬಿಡುತ್ತಾರೆ ಎಂದೇ ಹೇಳಲಾಗಿತ್ತು. ಇದಕ್ಕೆ ಪೂರಕವಾಗಿ, ಈಗ ಸ್ವತಃ ಜೇಟ್ಲಿ ಅವರೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ನನ್ನನ್ನು ಜವಾಬ್ದಾರಿಯಿಂದ ಮುಕ್ತ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ಮಧ್ಯೆ ಬುಧವಾರ ರಾತ್ರಿ ಮೋದಿ ಅವರೇ, ಜೇಟ್ಲಿ ನಿವಾಸಕ್ಕೆ ತೆರಳಿ ಹಣಕಾಸು ಖಾತೆ ವಹಿಸಿಕೊಳ್ಳುವಂತೆ ಮನವೊಲಿಕೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next