ಬೆಳಗಾವಿ: ಇಲ್ಲಿಯ ಗಾಂಧಿನಗರ ಬಳಿ ನಿರ್ಮಾಣಗೊಂಡಿರುವ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆ ವಿರುದ್ಧ ಸಲ್ಲಿಸಿದ್ದ
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೆ„ಕೋರ್ಟ್ ತಿರಸ್ಕರಿಸಿದ್ದು, ಜೈ ಕಿಸಾನ್ ಮಾರುಕಟ್ಟೆಯ ವ್ಯಾಪಾರಸ್ಥರು
ಸಂತಸಗೊಂಡಿದ್ದಾರೆ.
Advertisement
ಧಾರವಾಡ ಹೆ„ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಜ.10ರಂದು ಅರ್ಜಿ ತಿರಸ್ಕರಿಸಿದರು. ಭಾರತೀಯ ಕೃಷಿ ಸಮಾಜ(ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಹಾಗೂ ಇತರ ಐವರು ಕರ್ನಾಟಕ ಹೆ„ಕೋರ್ಟಿನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿ, ಬೆಳಗಾವಿ ಮಹಾನಗರ ಪಾಲಿಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಕೃಷಿ ಇಲಾಖೆ ಜೈ ಕಿಸಾನ್ ಸಗಟು ಮಾರುಕಟ್ಟೆಗೆ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ 2021ರಲ್ಲಿ ಸಾರ್ವಜನಿಕ ಹಿತಾಸಕ್ತಿಅರ್ಜಿ ಸಲ್ಲಿಸಿದ್ದರು.
Related Articles
Advertisement
ಹಿಂದಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಅಂತಹ ಯಾವುದೇ ಆರೋಪಗಳನ್ನು ಮಾಡಲಾಗಿಲ್ಲ ಎಂಬುದನ್ನು ಗಮನಿಸಿದನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದೆ ಎಂದು ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆ ಕಾರ್ಯದರ್ಶಿ ಎ.ಕೆ. ಬಾಗವಾನ್ ತಿಳಿಸಿದ್ದಾರೆ. ತರಕಾರಿ ಮಾರತುಕಟ್ಟೆ ಆರಂಭಿಸಿದಾಗಿನಿಂದ ಬಹಳ ತೊಂದರೆ ಆಗುತ್ತಿವೆ. ಅನೇಕರು ಸೇರಿ ನಮಗೆ ತೊಂದರೆ ನೀಡುತ್ತಿದ್ದರು. ನಮ್ಮ ವಿರುದ್ಧ ದೂರು ದಾಖಲಿಸಿ ಹೆದರಿಸುವ ಪ್ರಯತ್ನ ಮಾಡಿದರು. ಬೆಳಗಾವಿ ನ್ಯಾಯಾಲಯ, ಧಾರವಾಡ ಹೆ„ಕೋರ್ಟಿನಲ್ಲಿಯೂ ಅರ್ಜಿ ತಿರಸ್ಕಾರಗೊಂಡಿದೆ. ರಫೀಕ ಖಾನಾಪುರಿ ಎಂಬವರು ಹಾಕಿರುವ ಅರ್ಜಿಯೂ ತಿರಸ್ಕಾರಗೊಂಡಿದೆ. 2021ರಲ್ಲಿ ಸಿದಗೌಡ ಮೋದಗಿ ಹಾಕಿದ್ದ ಅರ್ಜಿ ಈಗ ತಿರಸ್ಕಾರಗೊಂಡಿದ್ದರಿಂದ ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದು ಸಂತಸ ಹಂಚಿಕೊಂಡರು. ನಮ್ಮ ಮಾರುಕಟ್ಟೆ ಅನಧಿಕೃತ ಎಂದು ಸುಳ್ಳು ಆರೋಪ ಮಾಡಲಾಗುತ್ತಿತ್ತು. ಸುಳ್ಳು ದೂರು ದಾಖಲಿಸಲಾಗಿತ್ತು. ಇದರಿಂದ ಮಾನಸಿಕವಾಗಿ ಬಹಳ ತೊಂದರೆ ಆಗಿತ್ತು. ನಮ್ಮ ವಿರುದ್ಧದ ಎಲ್ಲ ಅರ್ಜಿಗಳು ತಿರಸ್ಕಾರಗೊಂಡಿವೆ. ಈಗ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಈ ಎಲ್ಲ ಸಮಸ್ಯೆಯಿಂದ ಪಾರಾಗಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ.
*ಎ.ಕೆ. ಬಾಗವಾನ್, ಕಾರ್ಯದರ್ಶಿ,
ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆ ಸಂಘ