Advertisement

Sandalwood: ರಂಗನಾಯಕ ನನ್ನ ಸಿನಿಮಾವಲ್ಲ ,ಕ್ಷಮೆಯಿರಲಿ… ಜಗ್ಗೇಶ್‌ ನೇರ ಮಾತು

09:52 AM Mar 18, 2024 | Team Udayavani |

ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕ ಗುರುಪ್ರಸಾದ್‌ ಹಾಗೂ ನಟ ಜಗ್ಗೇಶ್‌ ಕಾಂಬಿನೇಶನ್‌ನಲ್ಲಿ “ರಂಗನಾಯಕ’ ಎಂಬ ಸಿನಿಮಾ ಬಂದಿತ್ತು. ಆದರೆ, ಈ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಿಂದ ಅಪಸ್ವರ ಎದ್ದಿತ್ತು. ಇಂತಹ ಸಿನಿಮಾಗಳನ್ನು ಜಗ್ಗೇಶ್‌ ಯಾಕಾಗಿ ಮಾಡುತ್ತಾರೆ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದರು. ಈಗ ಜಗ್ಗೇಶ್‌ ಇದಕ್ಕೆ ಉತ್ತರಿಸಿದ್ದಾರೆ.

Advertisement

ತಮ್ಮ ಹುಟ್ಟುಹಬ್ಬದವಾದ ಭಾನುವಾರ ಮಂತ್ರಾಲಯದಿಂದ ಲೈವ್‌ ಮಾಡಿರುವ ಜಗ್ಗೇಶ್‌, “ರಂಗನಾಯಕ ನನ್ನ ಸಿನಿಮಾವಲ್ಲ. ಕ್ಷಮೆ ಇರಲಿ’ ಎಂದಿದ್ದಾರೆ.

ಅವರ ಮಾತು ಹೀಗಿದೆ, “ಮೊನ್ನೆ ಒಂದು ಚಿತ್ರ ಮಾಡಿದೆ. ಅದರಿಂದ ಎಲ್ಲರಿಗೂ ನೋವಾಗಿದೆ. ಅದರಲ್ಲಿ ನನ್ನ ತಪ್ಪಿಲ್ಲ. ನನಗೆ ನಂಬಿಕೆ ಜಾಸ್ತಿ. ಯಾರು ನನ್ನಲ್ಲಿ ಶರಣಾಗತರಾಗಿ, ಸಹಕಾರ ಮಾಡಿ ಎಂದರೆ ನಾನು ನಂಬುತ್ತೇನೆ. ಆ ಚಿತ್ರ ನನ್ನದಲ್ಲ. ಒಬ್ಬ ನಿರ್ದೇಶಕನನ್ನು ನಂಬಿ ನಾನು ಕೆಲಸ ಕೊಟ್ಟಾಗ, ಆತ ತನ್ನ ಆಸೆಯ ಪ್ರಕಾರ ಕರ್ತವ್ಯ ನಿರ್ವಹಿಸಿದ್ದಾನೆ. ನನಗೂ, ಅದಕ್ಕೂ ಸಂಬಂಧವಿಲ್ಲ. ನನ್ನ ಮೇಲೆ ಕ್ಷಮೆ ಇರಲಿ. ನಾನು ಪ್ರೀಮಿಯರ್‌ ಪದ್ಮಿನಿಯಂತಹ ಒಳ್ಳೆಯ ಚಿತ್ರ ಕೊಟ್ಟಿದ್ದೀನಿ. 8 ಎಂಎಂ, ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಗಳಲ್ಲಿ ನಟಿಸಿದ್ದೇನೆ. ಯಾರದೋ ಅಪರಾಧಕ್ಕೆ ನನ್ನ ಮೇಲೆ ಕೋಪ ಬೇಡ. ಇನ್ನೂ ಸುಮಾರು ಸಿನಿಮಾ ಮಾಡೋದಿದೆ. ವೃತ್ತಿಯಲ್ಲಿ ಸಣ್ಣ-ಪುಟ್ಟ ಲೋಪದೋಷಗಳಿದ್ದರೆ ಕ್ಷಮೆ ಇರಲಿ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next