Advertisement

ದರ್ಶನ್‌ ಅಭಿಮಾನಿಗಳ “ಕುರುಕ್ಷೇತ್ರ’ಸಂಭ್ರಮಕ್ಕೆ ಜಗ್ಗೇಶ್‌ ಸಾಥ್‌

10:00 AM Aug 28, 2019 | Team Udayavani |

ದರ್ಶನ್‌ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅದಕ್ಕೆ ಕಾರಣ “ಕುರುಕ್ಷೇತ್ರ’ ಚಿತ್ರ. ದರ್ಶನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಕುರುಕ್ಷೇತ್ರ’ ಚಿತ್ರದ ಕಲೆಕ್ಷನ್‌ ನೂರು ಕೋಟಿ ರೂಪಾಯಿ ದಾಟಿ ಮುನ್ನುಗ್ಗುತ್ತಿದೆ ಎಂಬ ಸುದ್ದಿ. ಹೌದು, “ಕುರುಕ್ಷೇತ್ರ’ ಚಿತ್ರದ ಕಲೆಕ್ಷನ್‌ ಬಗ್ಗೆ ಹೀಗೊಂದು ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಇದು ದರ್ಶನ್‌ ಅಭಿಮಾನಿಗಳಿಗೆ ಖುಷಿ ತಂದಿದೆ. ಇವರ ಈ ಸಂಭ್ರಮಕ್ಕೆ ನಟ ಜಗ್ಗೇಶ್‌ ಕೂಡಾ ಸಾಥ್‌ ನೀಡಿದ್ದಾರೆ.

Advertisement

ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್‌ ಅಭಿಮಾನಿಗಳು “ಕುರುಕ್ಷೇತ್ರ’ ಚಿತ್ರ ನೂರು ಕೋಟಿ ದಾಟಿ ಮುನ್ನುಗ್ಗುತ್ತಿದೆ ಎಂದು ಸಂಭ್ರಮಿಸುತ್ತಿದ್ದರೆ, ಅವರ ಸಂಭ್ರಮದಲ್ಲಿ ಜಗ್ಗೇಶ್‌ ಕೂಡಾ ಜೊತೆಯಾಗಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ನನ್ನ ಆನಂದಕ್ಕೆ ಪಾರವೇ ಇಲ್ಲ! ಈ ಬಗ್ಗೆ ಟ್ವೀಟ್‌ ಮಾಡಿರುವ ಜಗ್ಗೇಶ್‌, “ಅನ್ಯ ರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸಿನಲ್ಲಿ ಒಬ್ಬನೆ ನೋವು ನುಂಗಿ ಬದುಕುತ್ತಿದ್ದೆ! ಭಾರಿಸಲಿ ನಮ್ಮ ಹುಡುಗರು,ಕನ್ನಡ ಡಿಂಡಿಮವ!ನಮ್ಮ ಹೆಮ್ಮೆಯ ಕನ್ನಡ ಕನ್ನಡಿಗರು ಕನ್ನಡ ಚಿತ್ರರಂಗ ರಾಯರ ದಯೆಯಿಂದ ..ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ …ಮೆರೆಸಲಿ ಎಂದು ಆಶಿಸುವೆ’ ಎಂದಿದ್ದಾರೆ.

ಹಾಗಾದರೆ, “ಕುರುಕ್ಷೇತ್ರ’ ಚಿತ್ರದ ಕಲೆಕ್ಷನ್‌ ಎಷ್ಟು, ನೂರು ಕೋಟಿ ದಾಟಿದೆಯೇ? ಈ ಬಗ್ಗೆ ನಿರ್ಮಾಪಕ ಹಾಗೂ “ಕುರುಕ್ಷೇತ್ರ’ ಚಿತ್ರದ ವಿತರಕ ರಾಕ್‌ಲೈನ್‌ ಹೇಳುವುದಿಷ್ಟು, “ಚಿತ್ರದ ಕಲೆಕ್ಷನ್‌ ಚೆನ್ನಾಗಿದೆ. ಜನ ಸಿನಿಮಾವನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ಆದರೆ, ನಾನು ಕಲೆಕ್ಷನ್‌ ಬಗ್ಗೆ ಮಾತನಾಡುವುದಿಲ್ಲ. ಈ ಹಿಂದೆಯೂ ನಾನು ಯಾವ ಸಿನಿಮಾದ ಬಜೆಟ್‌ ಹಾಗೂ ಕಲೆಕ್ಷನ್‌ ಬಗ್ಗೆ ಮಾತನಾಡಿಲ್ಲ. ಹಾಗಾಗಿ, ಈ ಸಿನಿಮಾದ ಕಲೆಕ್ಷನ್‌ ಬಗ್ಗೆಯೂ ಮಾತನಾಡಲ್ಲ’ ಎನ್ನುತ್ತಾರೆ. ಈಗಾಗಲೇ ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗಿದ್ದು, ಓಣಂ ಹಬ್ಬಕ್ಕೆ ಮಲಯಾಳಂನಲ್ಲಿ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next