Advertisement

ಜಗ್ಗೇಶ್ ರಾಜ್ಯಸಭೆಗೆ: ಕೊರಟಗೆರೆಯಲ್ಲಿ ಅಭಿಮಾನಿಗಳ ಸಂಭ್ರಮ

07:33 PM Jun 03, 2022 | Team Udayavani |

ಕೊರಟಗೆರೆ: ನವರಸ ನಾಯಕ ಜಗ್ಗೇಶ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೊರಟಗೆರೆಯ ಅವರ ಅಭಿಮಾನಿ ಬಳಗ ದಿಂದ ಶುಭಾಶಯ ಕೋರಿ ಸಾವಿರಾರು ಅಭಿಮಾನಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.

Advertisement

ಜಗ್ಗೇಶ್ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಮಲ್ಲಣ್ಣ ಮಲ್ಲಮ್ಮ ಮಾತನಾಡಿ, ನಮ್ಮೆಲ್ಲರ ನಮ್ಮೆಲ್ಲರ ನೆಚ್ಚಿನ ನಾಯಕ ಹೃದಯವಂತ ಬಡವರ ಆಶಾಕಿರಣ ಜಗ್ಗೇಶ್ ಅವರು ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ನಮ್ಮ ತಾಲೂಕಿನ ಎಲ್ಲಾ ಅಭಿಮಾನಿ ಬಳಗದ ವತಿಯಿಂದ ತುಂಬು ಹೃದಯದ ಶುಭಾಶಯಗಳು ಎಂದರು.

ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಜಗ್ಗೇಶ್ ಅವರ ಸರಳತೆ ಅವರು ಜನಸಾಮಾನ್ಯರ ಜೊತೆ ಬೆರೆಯುವುದೇ ನಮ್ಮೆಲ್ಲರಿಗೂ ಖುಷಿ. ಅವರ ರಾಜಕೀಯ ಜೀವನ ರಾಜಕೀಯ ಜೀವನವು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮ ಆಶಯ. ಇಂತಹ ವ್ಯಕ್ತಿಗಳು ರಾಜಕೀಯಕ್ಕೆ ಬರುವುದಿಲ್ಲ, ಗ್ರಾಮೀಣ ಪ್ರದೇಶಗಳಿಗೆ ಅತಿ ಹೆಚ್ಚು ಒತ್ತನ್ನು ಕೊಡುತ್ತಾರೆ. ಬಡವರ ಪರ ಚಿಂತನೆಗಳನ್ನು ಮಾಡುತ್ತಾರೆ ಎಂದು ಶುಭಹಾರೈಸಿದರು.

ಅಭಿಮಾನಿ ಬಳಗದ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಅಪಾರ ಅಭಿಮಾನಿಗಳನ್ನು ಹೊಂದಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ಜಗ್ಗೇಶ್ ಅವರು ರಾಜ್ಯಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಅವರಿಗೆ ರಾಘವೇಂದ್ರ ಸ್ವಾಮಿ ಮತ್ತು ನಾಡಿನ ಜನತೆಯ ಆಶೀರ್ವಾದ ಅವರ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಜಗ್ಗೇಶ್ ಅಭಿಮಾನಿ ಬಳಗದ ಸದಸ್ಯರು ಅಧ್ಯಕ್ಷರು ಮತ್ತು ಅಪಾರ ಅಭಿಮಾನಿಗಳ ಬಳಗವೇ ಪಟ್ಟಣದ ಹೆಸರು ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next