Advertisement

ಅನಂತ್‍ಗೆ ಕಂಬನಿ ಮಿಡಿದ ಜಗ್ಗೇಶ್: ಟ್ವೀಟ್‍ನಲ್ಲಿ ಹೇಳಿದ್ದೇನು?

10:52 AM Nov 12, 2018 | Team Udayavani |

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಹೆಚ್.ಎನ್. ಅನಂತಕುಮಾರ್ ನಿಧನಕ್ಕೆ ನಟ ಜಗ್ಗೇಶ್​​ ಸಂತಾಪ ಸೂಚಿಸಿದ್ದಾರೆ. 5 ತಿಂಗಳ ಹಿಂದೆ ಆರೋಗ್ಯವಾಗಿದ್ದ ಮನುಷ್ಯ ಈಗ ಕಾಲವಾದರು ಎಂದರೆ ಬದುಕಿನ ಮೇಲೆ ನಂಬಿಕೆಯೇ ಹೋಯ್ತು! ಎಂದು ಜಗ್ಗೇಶ್​​ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ಅಲ್ಲದೇ ಟ್ವೀಟರ್​ನಲ್ಲಿ ಸಂತಾಪ ಸೂಚಿಸಿರುವ ಜಗ್ಗೇಶ್​​, ಅನಂತ್​ಕುಮಾರ್​ ಅವರೊಂದಿಗಿನ ಫೋಟೋ ಶೇರ್ ಮಾಡಿದ್ದು, ಅಂದು ನನ್ನ ಜೊತೆ ವೇದಿಕೆಯಲ್ಲಿ ಅನಂತ ಜೀ..ಮೋದಿರವರಿಗೆ ನನ್ನ ಪರಿಚಯಿಸಿದ ಕ್ಷಣ. ಸಿಕ್ಕಾಗೆಲ್ಲ “ಬೇವುಬೆಲ್ಲ’ ಚಿತ್ರದ “ಜನುಮಾ ನೀಡುತ್ತಾಳೆ’ ಹಾಡು ಹಾಡುತ್ತಿದ್ದರು. ಅಪಾರ ಕನ್ನಡ ಪ್ರೇಮಿ! 5 ತಿಂಗಳ ಹಿಂದೆ ಇಷ್ಟು ಆರೋಗ್ಯದ ಮನುಷ್ಯ ಕಾಲವಾದರು ಎಂದರೆ ಬದುಕಿನ ಮೇಲೆ ನಂಬಿಕೆಯೇ ಹೋಯ್ತು! ನಶ್ವರ ಜಗಕೆ ನಗುವೆ ಶಾಶ್ವತ! ಒಳಿತು ಮಾಡು ಮನುಜ ಇರೋದು 3 ದಿವಸ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next