Advertisement

ಆಂಧ್ರದಲ್ಲಿ 30ರಿಂದ ಜಗನ್‌ ಆಡಳಿತ

02:01 AM May 26, 2019 | Sriram |

ಆಂಧ್ರಪ್ರದೇಶ : ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ವೈಎಸ್ಸಾರ್‌ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕನಾಗಿ ವೈ.ಎಸ್‌.ಜಗನ್ಮೋಹನ್‌ ರೆಡ್ಡಿ ಅವರು ಆಯ್ಕೆಯಾಗಿದ್ದಾರೆ.

Advertisement

ಬಳಿಕ ರಾಜ್ಯಪಾಲ ಇ.ವಿ.ಎಲ್‌.ನರಸಿಂಹನ್‌ರನ್ನು ಭೇಟಿ ಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಲಾಗಿದ್ದು, ಇದೇ 30ರಂದು ಜಗನ್‌ ವಿಜಯವಾಡದ ಇಂದಿರಾ ಗಾಂಧಿ ಮುನ್ಸಿಪಲ್‌ ಸ್ಟೇಡಿಯಂನಲ್ಲಿ ಮಧ್ಯಾಹ್ನ 12.23ಕ್ಕೆ ಆಂಧ್ರದ ನೂತನ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ. ನಿರ್ಗಮಿತ ಸಿಎಂ ಚಂದ್ರಬಾಬು ನಾಯ್ಡು ಅವರು ಮಾಡಿರುವ ತಪ್ಪು ಕೆಲಸಗಳಿಗಾಗಿ ದೇವರು ಅವರಿಗೆ ಸರಿಯಾದ ಶಿಕ್ಷೆಯನ್ನೇ ನೀಡಿದ್ದಾರೆ ಎಂದೂ ಜಗನ್‌ ಹೇಳಿದ್ದಾರೆ.

ಮೋದಿ ಸರಕಾರಕ್ಕೆ ಬಾಹ್ಯ ಬೆಂಬಲ?: ರವಿವಾರ ಹೊಸದಿಲ್ಲಿಗೆ ತೆರಳಲಿರುವ ಜಗನ್‌ ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತು ಕತೆ ನಡೆಸಲಿದ್ದಾರೆ. ಕೇಂದ್ರ ಸರಕಾರಕ್ಕೆ ಬಾಹ್ಯ ಬೆಂಬಲ ಘೋಷಿಸುವ ಕುರಿತು ಈ ವೇಳೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next