Advertisement

ವಿಶೇಷ ಸ್ಥಾನಮಾನಕ್ಕೆ ಜಗನ್‌ ಬೇಡಿಕೆ

11:42 AM May 28, 2019 | Team Udayavani |

ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಇದೇ 30ರಂದು ಪ್ರಮಾಣ ಸ್ವೀಕರಿಸಲಿರುವ ವೈಎಸ್ಸಾರ್‌ ಕಾಂಗ್ರೆಸ್‌ ಮುಖ್ಯಸ್ಥ ಜಗನ್ಮೋಹನ್‌ ರೆಡ್ಡಿ ರವಿವಾರ ಹೊಸದಿಲ್ಲಿಗೆ ತೆರಳಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನೂ ಅವರು ಮೋದಿ ಮುಂದಿಟ್ಟಿದ್ದಾರೆ. ಲೋಕಕಲ್ಯಾಣ ಮಾರ್ಗದಲ್ಲಿರುವ ಮೋದಿ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಗನ್‌, “ಆರ್ಥಿಕ ಸಂಕಷ್ಟದಲ್ಲಿರುವ ನಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎನ್ನುವುದು ನಮ್ಮ ಕೋರಿಕೆ. ನಾನೀಗ ಮೋದಿ ಅವರಿಕೆ ಕೋರಿಕೆಯಷ್ಟೇ ಸಲ್ಲಿಸಬಲ್ಲೆ. ಆದೇಶ ನೀಡಲು ಸಾಧ್ಯವಿಲ್ಲ. ಇಂದು ನಮಗೆ ವಿಶೇಷ ಸ್ಥಾನಮಾನ ಸಿಗದೇ ಇರಬಹುದು. ಆದರೆ, ನಾನು ಮೋದಿಯವರಿಗೆ ಮತ್ತೆ ಮತ್ತೆ ಇದನ್ನು ನೆನಪಿಸುತ್ತಿರುತ್ತೇನೆ. ಒಂದು ದಿನ ಬದಲಾವಣೆ ಕಾಣಬಹುದು’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next