Advertisement

ಹಸುಗೂಸಿನೊಂದಿಗೆ ನೇಣಿಗೆ ಶರಣಾದ ತಾಯಿ

03:58 PM Jun 15, 2022 | Team Udayavani |

ಜಗಳೂರು: ಪತಿಯ ಅಕ್ರಮ ಸಂಬಂಧ ಹಾಗೂ ಕಿರುಕುಳದಿಂದಬೇಸತ್ತು ಹತ್ತು ತಿಂಗಳ ಹಸುಗೂಸಿನೊಂದಿಗೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಜೆ.ಸಿ.ಆರ್‌ ಬಡಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

Advertisement

ಜಗಳೂರಿನ ಶಿಕ್ಷಕರಾದ ಎ. ನಾಗರಾಜ್‌ ಹಾಗೂ ಡಿ.ವಿ.ಅಂಬುಜಾ ಎಂಬುವವರ ಪುತ್ರಿ ನಿಖೀತಾ (25) ಮತ್ತು ಅವರಹತ್ತು ತಿಂಗಳ ಮಗು ಅನ್ವಿತ್‌ ಆತ್ಮಹತ್ಯೆಗೆ ಶರಣಾದವರು.ತಂದೆ-ತಾಯಿ ಕೆಲಸಕ್ಕೆ ಹೋದಾಗ ಬಾಗಿಲು ಹಾಕಿಕೊಂಡುಹತ್ತು ತಿಂಗಳ ಮಗುವನ್ನು ತಬ್ಬಿಕೊಂಡ ತಾಯಿ ನಿಖೀತಾ ಒಂದೇಹಗ್ಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪತಿ ಡಿ.ಮನೋಜ್‌ಕುಮಾರ್‌ ಅಕ್ರಮ ಸಂಬಂಧಮತ್ತು ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನಿಖೀತಾಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೃತಳ ತಾಯಿ ಅಂಬುಜಾಆರೋಪಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ನಿಖೀತಾಅವರನ್ನು ಹಿರಿಯೂರು ತಾಲೂಕಿನ ಬಸಪ್ಪನಮಾಳಿಗೆ ಗ್ರಾಮದಡಿ. ಮನೋಜ್‌ಕುಮಾರ್‌ಗೆ ವಿವಾಹ ಮಾಡಿಕೊಡಲಾಗಿತ್ತು.ಮನೋಜ್‌ಕುಮಾರ್‌ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿಸಿವಿಲ್‌ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಬೇರೆಹೆಣ್ಣುಮಕ್ಕಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದುಮೃತಳ ತಂದೆ ಶಿಕ್ಷಕ ಎ. ನಾಗರಾಜ್‌ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next