Advertisement

ನಾಯಿ, ನರಿಗೂ ಅಪಮಾನ ಮಾಡಿದ ಸಿದ್ದು: ಶೆಟ್ಟರ್‌

09:04 PM Jan 04, 2023 | Team Udayavani |

ಹುಬ್ಬಳ್ಳಿ: ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾಯಿ, ನರಿ ಅಂತಾ ಟೀಕೆ ಮಾಡೋದು ನಾಯಿಗೂ ಮಾಡುವ ಅಪಮಾನ. ಟೀಕೆ ನಿಲ್ಲಿಸಿ, ಒಳ್ಳೆಯ ರಾಜಕಾರಣ ಮಾಡಲಿ. ಕೀಳುಮಟ್ಟದ ಭಾಷೆಯಲ್ಲಿ ಮಾತನಾಡುವುದರಿಂದ ನೀವು ಉದ್ಧಾರ ಆಗಲ್ಲಾ, ಜನ ನಿಮಗೆ ಮತ ಕೂಡ ಹಾಕಲ್ಲ. ನಳೀನ್‌ಕುಮಾರ್‌ ಕಟೀಲ್‌ ರಸ್ತೆ ಅಭಿವೃದ್ಧಿ ಬಿಡಿ ಲವ್‌ ಜಿಹಾದ್‌ ಬಗ್ಗೆ ಗಮನ ಕೊಡಿ ಎಂದು ಹೇಳಿರುವ ಉದ್ದೇಶವೇ ಬೇರೆ. ಅವರು ಆ ಅರ್ಥದಲ್ಲಿ ಹೇಳಲಿಕ್ಕೆ ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುತ್ತವೆ. ಲವ್‌ ಜಿಹಾದ್‌ ಕೂಡ ಗಂಭೀರ ಸಮಸ್ಯೆಯಾಗಿದೆ. ಹಿಂದೂ ಹೆಣ್ಣು ಮಕ್ಕಳನ್ನ ಬ್ರೇನ್‌ ವಾಶ್‌ ಮಾಡಿ ಕರೆದುಕೊಂಡು ಹೋಗುತ್ತಿದ್ದಾರೆ. ಲವ್‌ ಜಿಹಾದ್‌ ಹೆಸರಲ್ಲಿ ಎಷ್ಟೋ ಯುವತಿಯರ ಜೀವನ ಹಾಳಾಗಿದೆ. ಗಂಭೀರ ಸಮಸ್ಯೆಯಾದ್ದರಿಂದ ಚರ್ಚೆಯಾಗಲಿ ಎಂದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next