Advertisement

BJP ಪ್ರಣಾಳಿಕೆಗೆ ಸಾರ್ವಜನಿಕರ ಸಲಹೆ ಕೋರಿದ ಜೆ.ಪಿ. ನಡ್ಡಾ

12:34 AM Feb 27, 2024 | Team Udayavani |

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮುಂಬರುವ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ನಾಗರಿಕರ ಸಲಹೆಗಳನ್ನು ಕೋರಿದ್ದಾರೆ. ಚುನಾವಣ ಪ್ರಚಾರದ ಭಾಗವಾಗಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸೋಮವಾರ ವೀಡಿಯೋ ವ್ಯಾನ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ನಡ್ಡಾ, ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ಪ್ರಣಾಳಿಕೆ ಯಲ್ಲಿ ಯಾವ್ಯಾವ ಅಂಶಗಳಿರಬೇಕೆಂಬ ಬಗ್ಗೆ ಸಾರ್ವಜನಿಕರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಎಂದು ಮನವಿ ಮಾಡಿದರು.

Advertisement

ಜತೆಗೆ, ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಮ್ಮ ದೇಶವನ್ನು ನಿಲ್ಲಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಮಾಡಿರುವ ಸಾಧನೆಗಳ ಕುರಿತು ಜನರಿಗೆ ತಿಳಿಸಲು ಡಿಜಿಟಲ್‌ ಪರದೆಯುಳ್ಳ ವ್ಯಾನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. “ವಿಕಸಿತ್‌ ಭಾರತ್‌ ಮೋದಿ ಕೀ ಗ್ಯಾರಂಟಿ’ ಎಂಬ ಹೆಸರಿನ ವೀಡಿಯೋ ವ್ಯಾನ್‌ಗಳು ಪ್ರತೀ ಲೋಕಸಭಾ ಕ್ಷೇತ್ರದಲ್ಲೂ ಸಂಚರಿಸಲಿದೆ. ಮಾ. 15ರೊಳಗೆ ಸುಮಾರು 1 ಕೋಟಿ ಸಲಹೆಗಳನ್ನು ಈ ವ್ಯಾನ್‌ಗಳ ಮೂಲಕ ಸ್ವೀಕರಿಸುವ ಗುರಿ ಹೊಂದಿದ್ದೇವೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next