Advertisement
ಶುಕ್ರವಾರ ಪಕ್ಷದ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, “ಇವಿಎಂ ತಿರುಚುವಿಕೆ ವಿರುದ್ಧ ಹೋರಾಟ ಮಾಡಲು ಹಾಗೂ ಇದಕ್ಕೆ ಇತರೆ ಪಕ್ಷಗಳ ಬೆಂಬಲ ಪಡೆಯಲು ಯಾವುದೇ ಸಂಕೋಚವಿಲ್ಲದೆ ಮಾತುಕತೆಗೆ ತಯಾರಿದ್ದೇನೆ. ಎಲ್ಲಕ್ಕಿಂತ ಮೊದಲು ನನಗೆ ಪ್ರಜಾತಂತ್ರ ಉಳಿಯಬೇಕಿದೆ. ಅದಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ,’ ಎಂದಿದ್ದಾರೆ. ಜತೆಗೆ, ಬಿಜೆಪಿಯು ಉತ್ತರಪ್ರದೇಶದ 403 ಕ್ಷೇತ್ರಗಳ ಪೈಕಿ 250ರಲ್ಲಿ ಇವಿಎಂಗಳನ್ನು ತಿರುಚಿದೆ ಎಂದು ಆರೋಪಿಸಿದ್ದಾರೆ.
Related Articles
ಸಹೋದರ ಆನಂದ ಕುಮಾರ್ನನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಯಾವತಿ ನೇಮಕ ಮಾಡಿದ್ದಾರೆ. ಆದರೆ ಅವನನ್ನು ಎಂದಿಗೂ ಸಂಸದ, ಶಾಸಕ ಇಲ್ಲವೇ ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂಬ ಷರತ್ತಿನೊಂದಿಗೆ ಈ ನೇಮಕ ಮಾಡಿದ್ದೇನೆ. ಅವನ ಪೂರ್ಣ ಕೆಲಸ ಕೇವಲ ಪಕ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದೂ ಇದೇ ಸಂದರ್ಭದಲ್ಲಿ ಮಾಯಾ ಸ್ಪಷ್ಟಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯ ಸೋಲಿನ ನಂತರ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
Advertisement