Advertisement

ಮಂಗಳೂರು ಫರ್ಸ್ಟ್ ನ್ಯೂರೋ ಸೋಂಕು ಮೂಲ ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ವಿಫಲ: ಐವನ್ ಆರೋಪ

04:10 PM May 11, 2020 | keerthan |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಕಾರಣದಿಂದ ಇದುವರೆಗೆ ಮೂರು ಬಲಿಯಾಗಿದೆ. ಆದರೆ ಇನ್ನೂ ಸೋಂಕು ಮೂಲ ಪತ್ತೆಯಾಗಿಲ್ಲ. ಜಿಲ್ಲಾಡಳಿತ ಇದರಲ್ಲಿ ವಿಫಲತೆ ಕಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಈ ಸೋಂಕು ಹಬ್ಬಿ ಮೂರು ಬಲಿಯಾಗಿದ್ದು ಇನ್ನೂ ಮೂಲ ಪತ್ತೆಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳ್ತಾರೆ. ಇದುವರೆಗೆ ಇದರ ಮೂಲ ಕಂಡುಕೊಳ್ಳುವಲ್ಲಿ ಸಚಿವ ಜಿಲ್ಲಾಡಳಿತ ವಿಫಲವಾಗಿದೆ ಎಂದರು.

ಜನರಲ್ಲಿ ಅನುಮಾನ ಮೂಡುವಂತೆ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ವರ್ತನೆ ಇದೆ. ಫಸ್ಟ್ ನ್ಯೂರೋದಿಂದ ಸೊಂಕು ಹರಡಿದ ಬಗ್ಗೆ ತನಿಖೆ ನಡೆಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಐವನ್ ಡಿಸೋಜ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next