Advertisement

ಮಾಯಾಜಾಲ,ಮನಸ್ಥಿತಿ ಇತ್ಯಾದಿ

02:27 PM Aug 28, 2022 | Team Udayavani |

ಬಹುತೇಕ ಹೊಸಬರೇ ಸೇರಿಕೊಂಡು ನಿರ್ಮಿಸುತ್ತಿರುವ “ಇತ್ಯಾದಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು.

Advertisement

ನಿರ್ದೇಶಕ ಮಹೇಶ್‌ ಕುಮಾರ್‌ “ಇತ್ಯಾದಿ’ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ನಿರ್ಮಾಪಕ ಧರ್ಮಶ್ರೀ ಮಂಜುನಾಥ್‌, ಸಂಭಾಷಣೆಗಾರ ಮಾಸ್ತಿ ಮೊದಲಾದವರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಹಿಂದೆ “ಬೆಟ್ಟದ ಆಸೆ’ ಎಂಬ ಕಲಾತ್ಮಕ ಚಿತ್ರವನ್ನು ನಿರ್ದೇಶಿಸಿದ್ದ ಚಿತ್ರದುರ್ಗದ ವಿಕಾಸ್‌ ನಾಗರಾಜ್‌ ಬಿ. ಎನ್‌ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. “ನೀಲಕಂಠ ಫಿಲಿಂಸ್‌’ ಬ್ಯಾನರ್‌ನಲ್ಲಿ ಯೋಗರಾಜ್‌. ಡಿ ನಿರ್ಮಾಣ ಮತ್ತು ಛಾಯಾಗ್ರಹಣವಿರುವ “ಇತ್ಯಾದಿ’ ಚಿತ್ರದಲ್ಲಿ ಸಚ್ಚಿನ್‌, ರಘು ಪಾಂಡೇಶ್ವರ, ವೀರೇಶ್‌ ಸುತ್ತಿನಮಠ, ರೇಷ್ಮಾ, ರಶ್ಮಿತಾ, ಪ್ರೀತಂ, ರಾಧಿಕಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಮುಹೂರ್ತದ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿಕಾಸ್‌ ನಾಗರಾಜ್‌, “ಜನರು ಮಾಯಾಜಾಲದಲ್ಲಿ ಇದ್ದರೆ ಹೇಗೆ ಇರ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ನಮ್ಮಲ್ಲಿರುವ ಒಂದು ಪಾತ್ರವನ್ನು ಬೇರೆಯವರು ಹೇಗೆ ಹುಡುಕುತ್ತಾರೆ, ಹೇಗೆ ನೋಡುತ್ತಾರೆ ಅನ್ನೋದೆ ಸಿನಿಮಾದ ಕಥಾಹಂದರ. ಎಲ್ಲರ ಮನಸ್ಥಿತಿಗೂ ಬೇರೆ ಬೇರೆ ಅರ್ಥ ಕಲ್ಪಿಸುತ್ತಾ ಸಿನಿಮಾ ಸಾಗುತ್ತದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಸಂಬಂಧವಿರುತ್ತದೆ’ ಎಂದು ವಿವರಣೆ ನೀಡಿದರು. ಸದ್ಯ ಮುಹೂರ್ತವನ್ನು ಆಚರಿಸಿಕೊಂಡಿರುವ “ಇತ್ಯಾದಿ’ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‌ನಿಂದ ಆರಂಭವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next