Advertisement

ಬಾಹುಬಲಿ-2 ಬಿಡುಗಡೆಗೆ ತಡೆ ಸರಿಯಲ್ಲ: ರಾಜಮೌಳಿ

10:15 AM Apr 17, 2017 | Team Udayavani |

ಬೆಂಗಳೂರು: ಎ.28ಕ್ಕೆ “ಬಾಹುಬಲಿ-2′ ಸಿನೆಮಾ ತೆರೆ ಕಾಣಲಿದೆ. “ಕಟ್ಟಪ್ಪ’ ಪಾತ್ರಧಾರಿ ನಟ ಸತ್ಯರಾಜ್‌ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಸಿನೆಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಕನ್ನಡ ಸಂಘಟನೆಗಳು ಹೇಳಿರುವುದು ಸರಿಯಲ್ಲ ಎಂದಿದ್ದಾರೆ ನಿರ್ದೇಶಕ ರಾಜಮೌಳಿ. ಸತ್ಯರಾಜ್‌ 9 ವರ್ಷಗಳ ಹಿಂದೆ ಆಕ್ಷೇಪಾರ್ಹ  ಮಾತುಗಳನ್ನಾಡಿದ್ದರೆಂದು ಕನ್ನಡ ಸಂಘಟನೆಗಳ ಆಕ್ಷೇಪವಾಗಿದೆ. 

Advertisement

ಸತ್ಯರಾಜ್‌ ಜತೆಗೆ 5 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಅವರು ಮತ್ತೂಬ್ಬರ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡುತ್ತಾರೆಂದರೆ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ ರಾಜಮೌಳಿ. 9 ವರ್ಷಗಳ ಹಿಂದಿನ ಮಾತುಗಳ ಬಳಿಕ ಅವರ 30 ಸಿನೆಮಾಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿವೆ. ಬಾಹುಬಲಿ 1 ಬಿಡುಗಡೆಯಾದ ಸಂದರ್ಭದಲ್ಲಿಯೂ ಆಕ್ಷೇಪಾರ್ಹ ಮಾತುಗಳ ಬಗ್ಗೆ ಯಾರೂ ಪ್ರಶ್ನಿಸಲಿಲ್ಲ. ಈಗ ಏಕಾಏಕಿ ಹಳೆಯ ವಿವಾದ ಯಾವ ಕಾರಣಕ್ಕಾಗಿ ಪ್ರಸ್ತಾವವಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ ರಾಜಮೌಳಿ. ಜತೆಗೆ ವಿವಾದಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next