Advertisement

ಕೋಳಿವಾಡ ಮನೆ ಮೇಲೆ ಐಟಿ ರೇಡ್‌ ದ್ವೇಷ ರಾಜಕಾರಣ ಅಲ್ಲ: ಬೊಮ್ಮಾಯಿ

09:40 AM Dec 05, 2019 | Sriram |

ದಾವಣಗೆರೆ: ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಕೋಳಿವಾಡ ಮನೆ ಮೇಲೆ ನಡೆದ ಐಟಿ ದಾಳಿ ದ್ವೇಷದ ರಾಜಕಾರಣ ಅಲ್ಲ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Advertisement

ಪತ್ರಕರ್ತರ ಜತೆ ಮಾತನಾಡಿದ ಅವರು, ಚುನಾವಣಾ ಧಿಕಾರಿಗಳು ಐಟಿ ಅ ಧಿಕಾರಿಗಳೊಂದಿಗೆ ನಡೆಸಿದ ದಾಳಿ ಇದು. ನಮಗೂ ಐಟಿ ದಾಳಿಗೂ ಸಂಬಂಧವಿಲ್ಲ ಎಂದರು.

ಲಿಂಗಾಯತರು ಬಿಜೆಪಿಗೆ ಮತ ಹಾಕದಿದ್ದರೆ ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆದಂತೆ ಎಂದಿರುವ ಸಚಿವ ಮಾಧುಸ್ವಾಮಿ ಜತೆ ಮಾತನಾಡುತ್ತೇನೆ. ಈ ಬಗ್ಗೆ ಬಳ್ಳಾರಿಯ ಜಿಲ್ಲಾ ಧಿಕಾರಿ ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ್ದಾರೆ ಸತ್ಯಾಸತ್ಯತೆ ತಿಳಿದುಕೊಳ್ಳುತ್ತೇನೆ ಎಂದವರು ಹೇಳಿದರು.

ಡಿ.9ರ ಅನಂತರ ಸಿಹಿ ಸುದ್ದಿ ನೀಡುವುದಾಗಿ ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ಬೇರೆ ಅರ್ಥ ಇದೆ. ಸರಕಾರ ಬೀಳುವುದಕ್ಕಿಂತ ವಿಪಕ್ಷ ನಾಯಕ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದು ಸೂಕ್ತ ಎಂದೆನಿಸಿರಬೇಕು ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next