Advertisement

ಸಚಿವ ರಮನಾಥ್‌ ರೈ ಅಪ್ತರಿಬ್ಬರ ಕಚೇರಿಗಳ ಮೇಲೆ ಐಟಿ ದಾಳಿ

04:22 PM May 09, 2018 | |

ಮಂಗಳೂರು:ಚುನಾವಣಾ ರಣ ಕಣದಲ್ಲಿ  ಮತಬೇಟೆಯ ಹೋರಾಟ ತೀವ್ರವಾಗಿರುವ ವೇಳೆ ಯಲ್ಲೇ ಐಟಿ ಅಧಿಕಾರಿಗಳು ರಾಜಕಾರಣಿಗಳಿಗೆ ಶಾಕ್‌ ನೀಡುತ್ತಿದ್ದಾರೆ. ಮಂಗಳೂರಿನಲ್ಲಿ ಸಚಿವ ರಮನಾಥ ರೈ ಅವರ ಆಪ್ತರಿಬ್ಬರ ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿ ದಾಖಲೆಗಳ ಪರೀಶೀಲನೆ ನಡೆಸಲಾಗಿದೆ. 

Advertisement

ರೈ ಆಪ್ತರಾದ ಸುಧಾಕರ್‌ ಶೆಟ್ಟಿ ಅವರ ಕಾವೂರಿನಲ್ಲಿರುವ ಮೆಗ್ರೋಡಿ ಕನ್‌ಸ್ಟ್ರಕ್ಷನ್‌  ಮತ್ತು ಬಂಟ್ವಾಳದ ಮೇಲ್ಕಾರ್‌ ಬಳಿ ಸಂಜೀವ್‌ ಪೂಜಾರಿ ಅವರ ಬಿರ್ವ ಸೆಂಟರ್‌ನ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. 

ದಾಳಿ ಕುರಿತಾಗಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ರಮನಾಥ ರೈ ಅವರು ಸ್ಪರ್ಧಿಸುತ್ತಿರುವ ಬಂಟ್ವಾಳದಲ್ಲಿ  ಈ ಬಾರಿ ಜಿದ್ದಾಜಿದ್ದಿನ ವಾತಾವರಣ ನಿರ್ಮಾಣವಾಗಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next