Advertisement

ವಿವಿಗಳ ಅವ್ಯವಹಾರ ಹೇಳಿಕೆಯಿಂದ ಹಿಂದೆ ಸರಿಯಲ್ಲ

07:50 AM Aug 10, 2017 | |

ಬೆಂಗಳೂರು: “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ವಿವಿಗಳಲ್ಲಿ ಸುಮಾರು 500 ಕೋಟಿ ರೂ. ಅವ್ಯವಹಾರ ನಡೆದಿರುವ ಬಗ್ಗೆ ತಾವು ಈ ಹಿಂದೆ ನೀಡಿರುವ ಹೇಳಿಕೆಗೆ ಬದ್ಧ’ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, “ಈ ಪ್ರಕರಣದಲ್ಲಿ ಕುಲಾಧಿಪತಿಗಳಾಗಿರುವ ರಾಜ್ಯಪಾಲರಷ್ಟೇ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.

Advertisement

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ನಡೆದಿರುವ ಸುಮಾರು 300 ಕೋಟಿ ರೂ. ಅವ್ಯವಹಾರ ಸೇರಿದಂತೆ ಎಲ್ಲಾ ವಿವಿಗಳಲ್ಲಿ ಒಟ್ಟಾರೆ ಸುಮಾರು 500 ಕೋಟಿ ರೂ.ಗಳ ಅವ್ಯವಹಾರ ನಡೆದಿರುವುದು ಸತ್ಯ. ಈ ಕುರಿತು ನಾನು ಹಿಂದೆ ಬಹಿರಂಗಪಡಿಸಿದ ಈ ಮಾಹಿತಿಗೆ ಇವತ್ತಿಗೂ ಬದ್ಧನಾಗಿದ್ದೇನೆ. ವರದಿ ಪಡೆದುಕೊಂಡ ನಂತರವೇ ಆ ಮಾತು ಹೇಳಿದ್ದೇನೆ. ಆದರೆ, ಆ ವರದಿಗಳು ದೂಳು ತಿನ್ನುತ್ತಿದ್ದು, ರಾಜ್ಯಪಾಲರು ಕ್ರಮ ಕೈಗೊಳ್ಳಬೇಕೇ ಹೊರತು ಉನ್ನತ ಶಿಕ್ಷಣ ಇಲಾಖೆಗೆ ಅಧಿಕಾರ ಇಲ್ಲ ಎಂದರು

Advertisement

Udayavani is now on Telegram. Click here to join our channel and stay updated with the latest news.

Next