Advertisement

ವೃದ್ಧರು ಇಂದಿಗೂ ಪಿಂಚಣಿ ಪಡೆಯದಿರುವುದು ಬೇಸರ

07:09 AM Feb 05, 2019 | |

ಮಧುಗಿರಿ: ಕಳೆದ ಅವಧಿಯಲ್ಲಿ ಕ್ಷೇತ್ರ ದಲ್ಲಿ ಎಲ್ಲ ಸಾಧನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಆದರೆ, ಗ್ರಾಮಗಳಲ್ಲಿರುವ 80 ವರ್ಷದ ವೃದ್ಧರು ಇಂದಿಗೂ ಪಿಂಚಣಿ ಪಡೆಯದಿರುವುದು ಬೇಸರ ತರಿಸಿದೆ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಅಸಮಾಧಾನ ವ್ಯಕ್ತ ಪಡಿಸಿದರು.

Advertisement

ತಾಲೂಕಿನ ಮಿಡಿಗೇಶಿ ಹೋಬಳಿಯ ನೆರಳೇಕೆರೆ ಗ್ರಾಪಂ ವ್ಯಾಪ್ತಿಯ ವೀರಾಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆಮಾಡಿ ನೂರಾರು ವೃದ್ಧರಿಗೆ ಪಿಂಚಣಿ ಆದೇಶಪತ್ರ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್‌ ವಿತರಿಸಿ ಮಾತನಾಡಿದರು.

ಹಿಂದಿನ ಅವಧಿಯಲ್ಲಿ ಸಮಗ್ರ ಸಾಧನೆ ಮಾಡಿದ್ದೇವೆಂಬ ಅಧಿಕಾರಿಗಳು ಇಲ್ಲಿನ ಗ್ರಾಮದ ಹಲವಾರು ವೃದ್ಧರಿಗೆ ಅವಧಿ ಮೀರಿದರೂ ಪಿಂಚಣಿ ನೀಡಿಲ್ಲ ಎಂದು ಹಿಂದಿನ ಆಡಳಿತ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಅಧಿಕಾರಿ ಗಳಿಂದ ಕೂಬಿಂಗ್‌ ಮಾಡಿಸಿ ಅರ್ಹ ಫ‌ಲಾನುಭವಿಗಳಿಗೆ ಅನ್ಯಾಯವಾಗ ದಂತೆ ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡ ತುಂಗೋಟಿ ರಾಮಣ್ಣ, ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಶಿವಣ್ಣ, ತಾಪಂ ಸದಸ್ಯೆ ಪುಟ್ಟತಾಯಮ್ಮ, ದಲಿತ ಮುಖಂಡ ಶಿವಣ್ಣ, ಹೋಬಳಿ ಅಧ್ಯಕ್ಷ ಡಾ.ಶಿವಕುಮಾರ್‌, ಆಹಾರ ನಿರೀಕ್ಷಕ ಕೃಷ್ಣಮೂರ್ತಿ, ಶಿವಕುಮಾರ್‌ ವೀರಾ ಪುರ, ಪಾಪಣ್ಣ, ರಘು, ದ¿ನಂದ್‌, ಪಿಡಿಒ ಶಿವಕುಮಾರ್‌, ಹಾಗೂ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next