Advertisement

Renukaswamy Case ಸಂಧಾನಕ್ಕೆ ಮುಂದಾಗಿದ್ದೇವೆ ಎಂಬುದು ಸುಳ್ಳು: ಶಿವಣ್ಣಗೌಡರ

10:06 PM Jul 28, 2024 | Team Udayavani |

ಚಿತ್ರದುರ್ಗ: ನಾವು ಜಂಗಮರು, ಮನೆಗೆ ಯಾರು ಬಂದರೂ ಸ್ವಾಗತಿಸುತ್ತೇವೆ ಎಂದು ನಾನು ಹೇಳಿದ್ದನ್ನೇ ಇಟ್ಟುಕೊಂಡು ಸಂಧಾನಕ್ಕೆ ಮುಂದಾಗಿದ್ದಾರೆಂದು ಸುಳ್ಳುಸುದ್ದಿ ಹಬ್ಬಿಸಲಾಯಿತು ಎಂದು ಕೊಲೆಯಾದ ರೇಣುಕಾಸ್ವಾಮಿಯ ತಂದೆ ಶಿವಣ್ಣಗೌಡರು ಬೇಸರ ವ್ಯಕ್ತಪಡಿಸಿದರು.

Advertisement

ಚಿತ್ರನಟ ಗಣೇಶ ರಾವ್‌ ಹಾಗೂ ತಾರಕೇಶ್ವರಿ ಚಿತ್ರತಂಡ ಭೇಟಿ ವೇಳೆ ಮಾತನಾಡಿ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಗನನ್ನು ನೆನೆದು ಗದ್ಗದಿತರಾದರು.

ಗಣೇಶ ರಾವ್‌ ಮಾತನಾಡಿ, ದರ್ಶನ್‌ ಜತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದೇನೆ. ಸ್ವಭಾವತಃ ದರ್ಶನ್‌ ಅಂಥ ವ್ಯಕ್ತಿಯಲ್ಲ. ಅವರ ಜತೆಗಿದ್ದವರು ಹೀಗೆ ಮಾಡಿದ್ದಾರೆ. ನಾನು ಯಾರನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ. ದರ್ಶನ್‌ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next