Advertisement

ಮಮತಾ ಬ್ಯಾನರ್ಜಿ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ: ಬಿಜೆಪಿ ಹಿರಿಯ ನಾಯಕ

10:04 AM Sep 30, 2019 | Team Udayavani |

ಹೊಸದಿಲ್ಲಿ; ನಾರದ ಸ್ಟಿಂಗ್ ಪ್ರಕರಣದ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನನ್ನ ರಾಜಕೀಯ ಜೀವನವನ್ನು ಕೊನೆಗೊಳಿಸಲು ಸಂಚು ನಡೆಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮುಕುಲ್ ರಾಯ್ ಆರೋಪಿಸಿದ್ದಾರೆ.

Advertisement

ನಾರದ ಪ್ರಕರಣದಲ್ಲಿ ನನ್ನ ಹೆಸರನ್ನು ತಳುಕಿ ಹಾಕಿಸಲು ತನ್ನ ಪೊಲೀಸ್ ರನ್ನು ಬಂಧಿಸಿದ್ದಾರೆ, ಆ ಮೂಲಕ ಆ ಪೊಲೀಸ್ ನನ್ನ ಹೆಸರನ್ನು ಸಿಬಿಐ ಮುಂದೆ ಹೇಳುವಂತೆ ಮಮತಾ ಮಾಡಿದ್ದಾರೆ. ಇದು ಅವರ ಪಿತೂರಿ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.

ನಾರದ ಸ್ಟಿಂಗ್ ಆಪರೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಶನಿವಾರ ಹೊಸದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಮುಕುಲ್ ರಾಯ್ ವಿಚಾರಣೆಗೆ ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next