Advertisement

ISRO ಕ್ಷುದ್ರಗ್ರಹದಿಂದ ಭೂಮಿ ರಕ್ಷಿಸಲು ನಾವು ಉತ್ಸುಕ: ಎಸ್‌.ಸೋಮನಾಥ್‌

12:03 AM Jul 05, 2024 | Team Udayavani |

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯು 2029ರಲ್ಲಿ ಭೂಮಿಗೆ ಅಪ್ಪಳಿಸಲಿದೆ ಎನ್ನಲಾದ ಅಪೋಫಿಸ್‌ ಕ್ಷುದ್ರಗ್ರಹದಿಂದ ಭೂಮಿ ಯನ್ನು ರಕ್ಷಿಸುವ ಕಾರ್ಯ ಯೋಜನೆಯಲ್ಲಿ ಭಾಗಿಯಾ ಗಲು ಉತ್ಸುಕವಾಗಿದೆ ಎಂದು ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ. ಸಂದರ್ಶನ ವೊಂದರಲ್ಲಿ ಮಾತನಾಡಿ, ಅಪೋಫಿಸ್‌ ಪ್ರಸ್ತುತ ಅತೀ ಅಪಾಯಕಾರಿ ಕ್ಷುದ್ರಗ್ರಹ ವಾಗಿದ್ದು, 2029ರ ಎ. 13 ಮತ್ತು 2036ರಲ್ಲಿ ಭೂಮಿಗಪ್ಪಳಿಸಬಹುದು. ಬ್ರಹ್ಮಾಂಡದ ಇತಿಹಾಸ ನೋಡಿದರೆ, ಇಂತಹ ಘಟನೆ ಆಗಾಗ ನಡೆಯುತ್ತವೆ. ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸಿದರೆ ಜೀವಸಂಕುಲ ಅಳಿಯಬಹುದು ಎಂದು ಸೋಮನಾಥ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next