Advertisement

Bharamasagara;ಕಳ್ಳತನಕ್ಕೆ ಬಂದು ಆಟೋ ಮತ್ತು ಬೈಕ್ ಬಿಟ್ಟು ಪರಾರಿ

12:14 AM Jul 02, 2024 | Team Udayavani |

ಭರಮಸಾಗರ: ಕಳ್ಳತನ ಮಾಡಲು ಬಂದ ಕಳ್ಳರ ಗುಂಪೊಂದು ಹಳ್ಳಿಯ ಜನರ ಸಮಯ ಪ್ರಜ್ಞೆಯಿಂದ ಕಳ್ಳತನ ಮಾಡಲು ಸಾಧ್ಯವಾಗದೆ ಆಟೋ ಮತ್ತು ಒಂದು ಬೈಕ್ ನ್ನು ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.

Advertisement

ಸಮೀಪದ ಕೋಡಿಹಳ್ಳಿ ಗ್ರಾಮದಲ್ಲಿ ಆಟೋ , ಬೈಕ್ ನಲ್ಲಿ ಬಂದಿದ್ದ ಕಳ್ಳರ ಗುಂಪು ದೇಗುಲದ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿರುವದನ್ನು ಕಂಡು ಹಳ್ಳಿಗರು ಎಚ್ಚೆತ್ತು ನೋಡಲು ತೆರಳುತ್ತಿದ್ದಂತೆ ಕಳ್ಳರು ಆಟೋ ಮತ್ತು ಬೈಕ್ ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ಈ ಬಗ್ಗೆ ಭರಮಸಾಗರ ಪೊಲೀಸ್ ಠಾಣೆಗೆ ಕಳ್ಳರ ಬಗ್ಗೆ ಮಾಹಿತಿ ನೀಡಿರುವ ಕೋಡಿಹಳ್ಳಿ ಗ್ರಾಮಸ್ಥರಿಗೆ ಕಳ್ಳರು ಬಿಟ್ಟು ಹೋಗಿರುವ ಆಟೋ ಮತ್ತು ಬೈಕ್ ನ್ನು ಠಾಣೆಗೆ ತರುವಂತೆ ಪೊಲೀಸರು ಸೂಚಿದ್ದಾರೆ ಎಂದು ಕೋಡಿಹಳ್ಳಿ ಗ್ರಾಮಸ್ಥರು ಹೇಳಿದ್ದಾರೆ.

ಪಕ್ಕದ ಕಾಲಗೆರೆ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಕುರಿಗಳು ಕಳವು ಮಾಡಲಾಗಿದೆ. ತಮ್ಮ ಹಳ್ಳಿಗೂ ಕುರಿ ಇತರೆ ಪ್ರಾಣಿಗಳ ಕಳವು ಮಾಡಲು ಬಂದಿರಬೇಕೆಂದು ಸ್ಥಳೀಯರು ಅನುಮಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next