Advertisement

ISRO: ಯುವಕರಿಗೆ ಪ್ರೇರೇಪಿಸಲು ಇಸ್ರೋ ಅಧ್ಯಕ್ಷರ ಆತ್ಮಚರಿತ್ರೆ- ಮುಂದಿನ ತಿಂಗಳು ಲೋಕಾರ್ಪಣೆ

12:00 AM Oct 26, 2023 | Team Udayavani |

ತಿರುವನಂತಪುರ: ಚಂದ್ರಯಾನ-3 ಹಾಗೂ ಆದಿತ್ಯ-ಎಲ್‌1 ಯಶಸ್ಸಿನ ನಂತರ ಇದೀಗ ಯುವಕರಿಗೆ ಸ್ಫೂರ್ತಿ ತುಂಬಲು ಆತ್ಮಚರಿತ್ರೆಯನ್ನು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ರಚಿಸಿದ್ದಾರೆ.
ಮಲಯಾಳಂನಲ್ಲಿ “ನಿಲುವು ಕುಡಿಚ್ಚ ಸಿಂಹಗಳ್‌”(ಚಂದ್ರನ ಬೆಳಕನ್ನು ಸೇವಿಸಿದ ಸಿಂಹಗಳು) ಹೆಸರಿನಲ್ಲಿ ಸೋಮನಾಥ್‌ ಅವರ ಆತ್ಮಚರಿತ್ರೆಯನ್ನು ಕೇರಳ ಮೂಲದ ಲಿಬಿ ಪಬ್ಲಿಕೇಶನ್ಸ್‌ ಹೊರತರುತ್ತಿದ್ದು, ನವೆಂಬರ್‌ನಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.

Advertisement

ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್‌ ವೆಚ್ಚ ತಗ್ಗಿಸಲು ಸಾಧಾರಣ ಕೊಠಡಿಯಲ್ಲಿ ವಾಸ, ದುಡ್ಡು ಉಳಿಸಲು ಸಾರಿಗೆ ಬಸ್‌ ಬದಲು ಹಳೆಯ ಸೈಕಲ್‌ನಲ್ಲಿ ಸಂಚಾರ.. ಹೀಗೆ ಅನೇಕ ಸಂಗತಿಗಳು ಸೋಮನಾಥ್‌ ಅವರ ಆತ್ಮಚರಿತ್ರೆಯಲ್ಲಿ ಅಡಕವಾಗಿದೆ.

“ಇದು ನಿಜವಾಗಿಯೂ ಎಂಜಿನಿಯ ರಿಂಗ್‌ ಅಥವಾ ಬಿಎಸ್‌ಸಿ ಸೇರಬೇಕೇ ಎಂದು ತಿಳಿಯದ ಹಳ್ಳಿಯ ಸಾಮಾನ್ಯ ಯುವಕನ ಕಥೆಯಾಗಿದೆ. ಆತನ ಉಭಯ ಸಂಕಟ, ನಂತರ ಜೀವನದಲ್ಲಿ ಮಾಡಿದ ಸರಿಯಾದ ನಿರ್ಧಾರ ಗಳು ಹಾಗೂ ಭಾರತದಂತಹ ದೇಶದಲ್ಲಿ ಅವನಿಗೆ ದೊರೆತ ಅವಕಾಶಗಳ ಕುರಿತಾಗಿದೆ’ ಎಂದು ಸೋಮನಾಥ್‌ ತಮ್ಮ ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ.
“ಈ ಪುಸ್ತಕವು ನನ್ನ ಜೀವನದ ಕಥೆಯನ್ನು ಜನರಿಗೆ ತಿಳಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ಜೀವನದಲ್ಲಿ ಹಲವು ಸಮಸ್ಯೆಗಳ ನಡುವೆಯೂ ಕನಸುಗಳನ್ನು ಬೆನ್ನತ್ತಲು ಯುವಕರಿಗೆ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ’ ಎಂದು ಸೋಮನಾಥ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next