Advertisement

ISRO: ಆತ್ಮಚರಿತ್ರೆ ಪ್ರಕಟಣೆ ಹಿಂಪಡೆದ ಇಸ್ರೋ ಅಧ್ಯಕ್ಷ ಸೋಮನಾಥ್‌

09:31 PM Nov 04, 2023 | Team Udayavani |

ತಿರುವನಂತಪುರ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರ ಆತ್ಮಚರಿತ್ರೆ “ನಿಲವು ಕುಡಿಚ ಸಿಂಹಂಗಳ್‌’ (ಚಂದ್ರನ ಬೆಳಕು ಸೇವಿಸಿದ ಸಿಂಹಗಳು) ಪ್ರಕಟವಾಗುವುದಿಲ್ಲ. ಪುಸ್ತಕದ ಬಗ್ಗೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement

ಪುಸ್ತಕದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್‌ ಅವರ ಕುರಿತಾದ ವಿಮಶಾìತ್ಮಕ ನಿಲುವುಗಳಿದ್ದು, ಚಂದ್ರಯಾನ-2ರ ವೈಫ‌ಲ್ಯವನ್ನು ಗುರಿಯಾಗಿಸಿ ಶಿವನ್‌ ಅವರನ್ನು ಟೀಕಿಸಲಾಗಿದೆ ಎನ್ನುವ ಮಾತು ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸೋಮನಾಥ್‌, ಇಸ್ರೋದಂಥ ಸಂಸ್ಥೆಯ ಉನ್ನತ ಸ್ಥಾನದಲ್ಲಿರುವಾಗ ಎಲ್ಲರೂ ಒಂದಲ್ಲ ಒಂದು ರೀತಿಯ ಸವಾಲುಗಳನ್ನು ದಾಟಿಯೇ ಇರಬೇಕಾಗುತ್ತದೆ. ಅಂಥ ಸವಾಲುಗಳು ಆ ಸಂಬಂಧಿಸಿದ ವಿಮರ್ಶೆಗಳನ್ನು ಚರ್ಚಿಸಲಾಗಿದೆ ಹೊರತು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ನಾನು ಗುರಿಯಾಗಿಸಿರಲಿಲ್ಲ ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next