Advertisement

ಗೂಂಡಾ ರೀತಿ ನಡೆದುಕೊಂಡ ಸಿಎಂ:ಈಶ್ವರಪ್ಪ ಆಕ್ರೋಶ

06:05 AM Sep 22, 2018 | |

ಶಿವಮೊಗ್ಗ: ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ನಡೆದುಕೊಳ್ಳದೆ ಗೂಂಡಾ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಜನರು ದಂಗೆ ಏಳಬೇಕಾಗುತ್ತೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿರುವುದನ್ನು ನೋಡಿದರೆ ಗೂಂಡಾ ರಾಜ್ಯ ನಡೀತಾ ಇದೆ ಎಂದು ಆರೋಪಿಸಿದರು. 

ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ನಿಮ್ಮ ಶಕ್ತಿ. ಬಿಜೆಪಿಯವರು ಖರೀದಿ ಮಾಡ್ತಾರೆ ಅಂದ್ರೆ ಹೇಗೆ? ಶಾಸಕರನ್ನು ರಕÒ‌ಣೆ ಮಾಡುವ ಯೋಗ್ಯತೆ ಇಲ್ಲವೆಂದ ಮೇಲೆ ರಾಜ್ಯದ ಜನರ ರಕÒ‌ಣೆ ಹೇಗೆ ಮಾಡ್ತೀರಿ. ಬಿಜೆಪಿ ಶಾಸಕರು ಹುಲಿಗಳಿದ್ದಂತೆ. ಒಬ್ಬರನ್ನಾದರೂ ಮುಟ್ಟಿ ನೋಡೋಣ ಎಂದು ಸವಾಲು ಹಾಕಿದರು.

ದಂಗೆ ಏಳಿ ಎಂದು ಹೇಳಿದ ಮುಖ್ಯಮಂತ್ರಿಗಳನ್ನು ನೋಡಿಲ್ಲ, ಕೇಳಿಲ್ಲ. ಅವರು ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ ಅವರು ಸುಮೋಟೋ ಕೇಸ್‌ ಹಾಕಬೇಕಿತ್ತು. ಅವರು ಯಾಕೆ ಬಾಯಿ ಮುಚ್ಚಿಕೊಂಡಿ¨ªಾರೆ? ನಿಮಗೆ ಕುರ್ಚಿನೇ ಬಹಳ ಮುಖ್ಯ ಎಂದರು. ಹುಚ್ಚು ಹಿಡಿದಿರೋದು ಕುಮಾರಸ್ವಾಮಿಗೆ. ಖುರ್ಚಿ ಹೋಗುತ್ತೆ ಅಂತಾ ಹುಚ್ಚು ಹಿಡಿದಿದೆ. ಅವರ ಮೇಲೆ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next