Advertisement

ಇಶ್ರತ್‌ ಪ್ರಕರಣ: ವಿಚಾರಣೆಗೆ ಸರಕಾರದ ಅನುಮತಿ ಇಲ್ಲ

12:30 AM Mar 20, 2019 | |

ಅಹಮದಾಬಾದ್‌: ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಪೊಲೀಸ್‌ ನಿವೃತ್ತ ಮಹಾ ನಿರೀಕ್ಷಕ ವಂಜಾರಾ ಹಾಗೂ ನಿವೃತ್ತ  ವರಿಷ್ಠಾಧಿಕಾರಿ ಎನ್‌.ಕೆ.ಅಮಿನ್‌ ಅವರ ವಿಚಾರಣೆಗೆ ಗುಜರಾತ್‌ ಸರಕಾರ ಅನುಮತಿ ನೀಡಲು ನಿರಾಕರಿಸಿದೆ. ಇದರಿಂದಾಗಿ, ಅವರಿಬ್ಬರ ವಿರುದ್ಧದ ಪ್ರಕರಣಗಳು ಬಿದ್ದುಹೋಗುವ ಸಾಧ್ಯತೆಯಿದೆ. ಗುಜರಾತ್‌ ಸರಕಾರ ಈ ಕುರಿತು ಬರೆದ ಪತ್ರವನ್ನು ಸಿಬಿಐ ವಕೀಲ ಆರ್‌.ಸಿ. ಕೋಡೇಕರ್‌, ನ್ಯಾಯಾಲಯಕ್ಕೆ ಸಲ್ಲಿಸಿದರು. ಇದೇ ವೇಳೆ ಹಾಜರಿದ್ದ ಸರ್ಕಾರಿ ಪರ ವಕೀಲರು, ವಂಜಾರಾ ಹಾಗೂ ಅಮಿನ್‌ ವಿರುದ್ಧದ ಸಿಬಿಐ ವಿಚಾರಣೆಯನ್ನು ಕೈಬಿಡುವಂತೆ ಕೋರಿ ಅರ್ಜಿಸಲು ಅವಕಾಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಅದಕ್ಕೆ ಸಮ್ಮತಿಸಿದ ನ್ಯಾ. ಜೆ.ಕೆ. ಪಾಂಡ್ಯ, ಮಾ. 26ರಂದು ಅರ್ಜಿ ಸಲ್ಲಿಸುವಂತೆ ಸೂಚಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next