Advertisement

ವಿಜಯ್‌ ಹಜಾರೆ ಟ್ರೋಫಿ ದಿಲ್ಲಿಗೆ ಇಶಾಂತ್‌ ಸಾರಥ್ಯ

06:25 AM Feb 01, 2018 | Team Udayavani |

ಹೊಸದಿಲ್ಲಿ: ಮುಂಬರಲಿರುವ “ವಿಜಯ್‌ ಹಜಾರೆ ಟ್ರೋಫಿ’ ಕ್ರಿಕೆಟ್‌ ಟೂರ್ನಿಯಲ್ಲಿ ದಿಲ್ಲಿ ತಂಡವನ್ನು ವೇಗಿ ಇಶಾಂತ್‌ ಶರ್ಮ ಮುನ್ನಡೆಸಲಿದ್ದಾರೆ. 15 ಸದಸ್ಯರ ತಂಡವನ್ನು ಬುಧವಾರ ಪ್ರಕಟಿಸಲಾಯಿತು.

Advertisement

ಸ್ಟಾರ್‌ ಆಟಗಾರರಾದ ಗೌತಮ್‌ ಗಂಭೀರ್‌, ರಿಷ್‌ಬ್‌ ಪಂತ್‌, ಉನ್ಮುಕ್‌¤ ಚಂದ್‌, ಪ್ರದೀಪ್‌ ಸಂಗ್ವಾನ್‌ ಕೂಡ ತಂಡದಲ್ಲಿದ್ದಾರೆ.

ಬಂಗಾಲ ಕೂಡ ತಂಡವನ್ನು ಪ್ರಕಟಿಸಿದೆ. ಅಂಡರ್‌ 19 ತಂಡದ ವೇಗಿ ಇಶಾನ್‌ ಪೊರೇಲ್‌, ಮನೋಜ್‌ ತಿವಾರಿ, ಅಶೋಕ್‌ ದಿಂಡ, ಅಭಿಮನ್ಯು ಈಶ್ವರನ್‌ ತಂಡಲ್ಲಿದ್ದಾರೆ. ಮುಂಬಯಿ ತಂಡವನ್ನು ಆದಿತ್ಯ ತಾರೆ ಮುನ್ನಡೆಸಲಿದ್ದಾರೆ.
ಕಾನ್ಪುರದಲ್ಲಿ ಫೆ. 4ರಿಂದ ಪಂದ್ಯಾವಳಿ ನಡೆಯಲಿದ್ದು, ದಿಲ್ಲಿ ಆರಂಭಿಕ ಪಂದ್ಯವನ್ನು ಫೆ. 5ರಂದು ಉತ್ತರ ಪ್ರದೇಶ ವಿರುದ್ಧ ಆಡಲಿದೆ. ಅದೇ ದಿನ ಬಂಗಾಲ ಮಹಾರಾಷ್ಟ್ರ ವಿರುದ್ಧ ಮುಖಾಮುಖೀ ಆಗಲಿವೆ.

ದಿಲ್ಲಿ ತಂಡ: ಇಶಾಂತ್‌ ಶರ್ಮ (ನಾಯಕ), ಪ್ರದೀಪ್‌ ಸಂಗ್ವಾನ್‌, ಗೌತಮ್‌ ಗಂಭೀರ್‌, ರಿಷಬ್‌ ಪಂತ್‌, ಹಿತೇನ್‌ ದಲಾಲ್‌, ಧ್ರುವ ಶೋರೆ, ನಿತೀಶ್‌ ರಾಣಾ, ಲಲಿತ್‌ ಯಾದವ್‌, ಉನ್ಮುಕ್‌¤ ಚಂದ್‌, ನವದೀಪ್‌ ಸೈನಿ, ಕುಲ್ವಂತ್‌ ಖೆಜೊÅàಲಿಯಾ, ಸುಬೋಧ್‌ ಭಾಟಿ, ಪವನ್‌ ನೇಗಿ, ಮನನ್‌ ಶರ್ಮ, ಕ್ಷಿತಿಜ್‌ ಶರ್ಮ.

Advertisement

Udayavani is now on Telegram. Click here to join our channel and stay updated with the latest news.

Next